• December 22, 2025

ಚಿರಂಜೀವಿ ಎದುರು ‘ಲೈಗರ್’ ಸೋಲಿನ ನೋವು ಬಿಚ್ಚಿಟ್ಟ ಪುರಿ ಜಗನ್ನಾಥ್

ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಕಂಡ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೇಳ ಹೆಸರಿಲ್ಲದೆ ಸೈಲೆಂಟ್ ಆಗಿ ಬಿಟ್ಟಿತ್ತು. ಲೈಗರ್ ಚಿತ್ರದ ಬಳಿಕ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಜನ ಗಣ ಮನ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಅದು ಕೂಡ ನಿಂತು ಹೋಗಿದೆ. ಇದುವರೆಗೂ ಸೈಲೆಂಟ್ ಆಗಿಯೇ ಇದ್ದ ನಿರ್ದೇಶಕ ಪುರಿ ಜಗನ್ನಾಥ್ ಇದೇ ಮೊದಲ ಭಾರಿಗೆ ನೋವನ್ನು ಹೊರ ಹಾಕಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲೇ ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಲೈಗರ್. ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ, ರಮ್ಯಾ ಕೃಷ್ಣ, ಅನನ್ಯಾ ಪಾಂಡೆ ನಟನೆಯ ಲೈಗರ್ ಚಿತ್ರ ತೆರೆಕಂಡ ಬಳಿಕ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ಹಾಕಿದ ದುಡ್ಡ ಬರದೆ ನಿರ್ಮಾಪಕರ ತಲೆ ಕೆಂಡಿಸಿಕೊಂಡಿದ್ದರು. ಸಿನಿಮಾದ ಮೇಲೆ ಚಿತ್ರತಂಡಕ್ಕೆ ಅದೆಷ್ಟರ ಮಟ್ಟಿಗೆ ವಿಶ್ವಾಸವಿತ್ತು ಎಂದರೆ ರಿಲೀಸ್ ಗೂ ಮುನ್ನ ಡಿಜಿಟಲ್ ರೈಟ್ಸ್ ನೂರಾರು ಕೋಟಿಗೆ ಕೇಳಿದ್ದರು ಚಿತ್ರತಂಡ ಕೊಡಲು ಹಿಂದೇಟು ಹಾಕಿತ್ತು. ರಿಲೀಸ್ ಬಳಿಕ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿತ್ತು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಇದೀಗ ಪುರಿ ಜಗನ್ನಾಥ್ ವಿಡಿಯೋ ಕಾಲ್ ಮೂಲಕ ಮೆಗಾಸ್ಟಾರ್ ಚಿರಂಜೀವಿ ಜೊತೆ ಲೈಗರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ನೀವು ಎಲ್ಲಿದ್ದೀರಿ? ಸ್ಕ್ರಿಪ್ಟ್‌ಗಳನ್ನು ನೋಡುತ್ತಿದ್ದೀರ? ಒಂದೊಮ್ಮೆ ಅಂದುಕೊಂಡ ರಿಸಲ್ಟ್‌ ಸಿನಿಮಾಗಳಿಂದ ಬರದಾಗ ಅದನ್ನು ಹೇಗೆ ಸ್ವೀಕಾರ ಮಾಡುತ್ತೀರಿ?” ಎಂದು ಚಿರಂಜೀವಿ, ಪುರಿ ಜಗನ್ನಾಥ್ ಅನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪುರಿ ಜಗನ್ನಾಥ್, ನಾನೀಗ ಮುಂಬೈನಲ್ಲಿದ್ದೇನೆ. ಚಿತ್ರಕತೆಗಳನ್ನು ನೋಡುತ್ತಿದ್ದೇನೆ. ಅದನ್ನು ಬಿಡಲು ಆಗುವುದಿಲ್ಲ” ಎಂದಿದ್ದಾರೆ. ”ಯಶಸ್ಸು ಬಂದರೆ ಬಹಳ ಎನರ್ಜಿ ಬರುತ್ತದೆ. ಸಿನಿಮಾ ಫೇಲ್ ಆದರೆ ಇದ್ದ ಎನರ್ಜಿಯೂ ಹೊರಟು ಹೋಗುತ್ತದೆ. ಯಶಸ್ಸು ಬಂದಾಗ, ನಾವೇ ಬುದ್ಧಿವಂತರು ಎನಿಸುತ್ತದೆ. ಸಿನಿಮಾ ಸೋತರೆ ನಮಗಿಂತ ಯಾರೂ ದಡ್ಡರಿಲ್ಲ ಎನಿಸುತ್ತದೆ. ಸಿನಿಮಾ ಸೋತಾಗ ನಂಬಿದವರು ಸಹ ಕೈಬಿಟ್ಟು ಹೋಗುತ್ತಾರೆ. ಎಲ್ಲವೂ ತಲೆಕೆಳಗಾಗುತ್ತದೆ. ಬೇರೆ-ಬೇರೆ ರೀತಿಯ ಸಮಸ್ಯೆಗಳು ಬರುತ್ತವೆ. ಆ ಸಮಯದಲ್ಲಿ ಧೈರ್ಯವಾಗಿ ಇರಬೇಕೆಂದರೆ ಖಂಡಿತ ಶಕ್ತಿ ಬೇಕು” ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ. ಈ ವೇಳೆ ಪುರಿ ಜಗನ್ನಾಥ್ ಗೆ ಸಮಾಧಾನ ಹೇಳಿದ ಚಿರಂಜೀವಿ, ತಮ್ಮ ಸಿನಿಮಾನೂ ಸೋತ ಬಗ್ಗೆ ಉದಾಹರಣೆ ಕೊಟ್ಟಿದ್ದಾರೆ. ‘ನೀನು ಪ್ರತಿಭಾವಂತ ತಂತ್ರಜ್ಞ. ಸೋಲನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ನನ್ನ ಒಂದು ಸಿನಿಮಾ ಸೋತಿತು. ಈಗ ಮತ್ತೊಂದು ಸಿನಿಮಾ ಗೆದ್ದಿದೆ. ನೀನೂ ಗೆಲ್ಲುತ್ತೀಯಾ’ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now