• June 21, 2026

karnatakaspecial.in

https://karnatakaspecial.in/

ಸ್ವಾತಂತ್ರ್ಯ ದಿನಾಚರಣೆಗೆ ಕಾಂತಾರ ಸಿನಿಮಾದಿಂದ ಮೊದಲ ಹಾಡು ಬಿಡುಗಡೆ

ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಹೊಂಬಾಳೆ ಫಿಲಂ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾದ ಮೊದಲ ಹಾಡು ಸ್ವಾತಂತ್ರ್ಯ ದಿನಾಚರಣೆ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಪ್ರಮೋದ್ ಮರವಂತೆ ರಚಿಸಿರುವ “ಸಿಂಗಾರ ಸಿರಿಯೆ” ಎಂಬ  ಮನಮೋಹಕ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲಿದ್ದು, ಹಾಡಿನಲ್ಲಿ ಜಾನಪದ ಸೊಗಡನ್ನು ಎತ್ತಿಹಿಡಿಯಲಾಗಿದೆ. ಗಾಯಕ ವಿಜಯ್ ಪ್ರಕಾಶ್, ಅನನ್ಯ ಭಟ್ ಹಾಗೂ ನಾಗರಾಜ್ ಪನ್ನಾರ್ ವಲ್ಟುರ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ […]Read More

ಹೊಂಬಾಳೆ ಫಿಲ್ಮ್ಸ್ ಜೊತೆ ಕೈ ಜೋಡಿಸಿದ ಕೀರ್ತಿ ಸುರೇಶ್: ಸ್ಯಾಂಡಲ್ ವುಡ್ ಗೆ

ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಹೊಂಬಾಳೆ ಫಿಲ್ಮ್ಸ್ ಸಾಲು ಸಾಲು ಸಿನಿಮಾಗಳನ್ನು ಹೊರ ತರುತ್ತಿದೆ. ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್ ಈಗಾಗ್ಲೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ಕೆಜಿಎಫ್ ಚಿತ್ರದ ಮೂಲಕ ದೇಶ-ವಿದೇಶದಲ್ಲೂ ಸದ್ದು ಮಾಡುತ್ತಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಮತ್ತೊಂದು ಹೊಸ ನ್ಯೂಸ್ ಸಿಕ್ಕಿದೆ. ಕನ್ನಡದ ಜೊತೆಗೆ ಪರಭಾಷೆಯ ಸ್ಟಾರ್ ಗಳ ಜೊತೆಗೆ ಹೊಂಬಾಳೆ ಫಿಲ್ಸ್ಮ್ ಕೈ ಜೋಡಿಸಿದೆ. ಇತ್ತೀಚೆಗಷ್ಟೇ ಮಲಯಾಳಂ ಸ್ಟಾರ್ ನಟ ಫಹಾದ್ ಜೊತೆ ಸಿನಿಮಾ […]Read More

ಹನಿಟ್ರ್ಯಾಪ್ ಆರೋಪ: ಸಿನಿಮಾ ರಿಲೀಸ್ ಗೂ ಮುನ್ನವೇ ಸ್ಯಾಂಡಲ್ ವುಡ್ ನಟನ ಬಂಧನ

ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಮ್ ಮಾಡಿದ ಆರೋಪದ ಮೇಲೆ ಕನ್ನಡದ ಯುವ ನಟ ಯುವ ಅಲಿಯಾಸ್ ಯುವರಾಜ್ ಎಂಬುವವನನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಮಿಸ್ಟರ್ ಭೀಮರಾವ್ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದ ನಟ ಇದೀಗ ಹನಿಟ್ರ್ಯಾಮ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಇತ್ತೀಚೆಗಷ್ಟೇ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದು ಸಿನಿಮಾ ರಿಲೀಸ್ ಗೂ ಮುನ್ನವೇ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ನಟ ಯುವರಾಜ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿರೋ ಉದ್ಯಮಿಯೊಂದಿಗೆ ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ. […]Read More

ಕಾರು ಅಪಘಾತಕ್ಕೆ ಬಲಿಯಾದ ಹಾಲಿವುಡ್ ಖ್ಯಾತ ನಟಿ: ಅಂಗಾಗ ದಾನಕ್ಕೆ ಮುಂದಾದ ಕುಟುಂಬಸ್ಥರು

ಹಾಲಿವುಡ್ ಖ್ಯಾತ ನಟಿ ಅನ್ನೆ ಹೆಚ್ಚೆ ಕಾರು ಲಾಸ್ ಏಂಜಲೀಸ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಕಳೆದ ಒಂದು ವಾರದಿಂದ ಕೋಮದಲ್ಲಿದ್ದ ನಟಿ ಕಾನೂನು ಬದ್ಧವಾಗಿ ಮೃತಪಟ್ಟಿರುವುದಾಗಿ ಅನ್ನೆ ಹೆಚ್ಚೆ ವಕ್ತಾರರು ತಿಳಿಸಿದ್ದಾರೆ. ಆಗಸ್ಟ್ 5ರಂದು ವಿಪರೀತ ಡ್ರಗ್ಸ್ ಸೇವಿಸಿ ಕಾರು ಚಲಿಸಿದ ಪರಿಣಾಮ ಅನ್ನೆ ಹೆಚ್ಚೆ ಅಪಘಾತಕ್ಕೀಡಾಗಿತ್ತು. ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ದಡ್ಡ ಬೆಂಕಿ ಆವರಿಸಿಕೊಂಡಿತ್ತು. ಈ ವೇಳೆ ಸ್ಥಳಿಯರು ನಟಿಗೆ ಸಹಾಯ ಮಾಡಲು ಮುಂದಾದರೂ ದಡ್ಡ ಬೆಂಕಿಯ ಪರಿಣಾಮ ಸಾಧ್ಯವಾಗಿರಲಿಲ್ಲ. […]Read More

ಪುನೀತ್ ನಟಿಸಬೇಕಿದ್ದ ದ್ವಿತ್ವ ಸಿನಿಮಾಗೆ ಬರ್ತಾರಾ ಮಲಯಾಳಂನ ಆ ಸ್ಟಾರ್ ನಟ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಸಾಕಷ್ಟು ತಿಂಗಳುಗಳೇ ಕಳೆದು ಹೋಗಿವೆ. ಆದರೂ ಇಂದಿಗೂ ಅಪ್ಪು ಅಭಿಮಾನಿಗಳ ಮನಸ್ಸಲ್ಲಿ ಶಾಶ್ವತವಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಹೆಸರನ್ನು ಜೀವಂತವಾಗಿಡಲು ಅಭಿಮಾನಿಗಳು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡ್ತಿದ್ದಾರೆ. ಪುನೀತ್ ನಿಧನಕ್ಕೂ ಮುನ್ನ ನಿರ್ದೇಶಕ ಪವನ್ ಕುಮಾರ್ ಹೇಳಿದ್ದ ದ್ವಿತ್ವ ಕಥೆಯನ್ನು ಮೆಚ್ಚಿಕೊಂಡಿದ್ದರು. ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಅದು ಕೈಗೂಡಲೇ ಇಲ್ಲ. ಆ ಬಳಿಕ ಪುನೀತ್ ಜಾಗಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲಕ್ಕೆ ಇದೀಗ […]Read More

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರೂಪ್ ಭಂಡಾರಿ: ನೆಚ್ಚಿನ ನಟನಿಗೆ ಶುಭಾಶಗಳ ಸುರಿಮಳೆ

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ನಿರೂಪ್ ಭಂಡಾರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 38ನೇ ವರ್ಷಕ್ಕೆ ಕಾಲಿಟ್ಟಿರೋ ನಿರೂಪ್ ಭಂಡಾರಿಗೆ ಅಭಿಮಾನಿಗಳು ಶುಭಾಷಯ ಕೋರಿದ್ದಾರೆ. ಆಗಸ್ಟ್ 13ರಂದು ಪುತ್ತೂರಿನಲ್ಲಿ ಜನಿಸಿದ ನಿರೂಪ್ ಭಂಡಾರಿ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ನಿರೂಪ್ ಭಂಡಾರಿ ತಂದೆ ಸುಧಾಕರ್ ಭಂಡಾರಿ ನಿರ್ದೇಶಕರಾಗಿದ್ದು ಅಣ್ಣ ಅನೂಪ್ ಭಂಡಾರಿ ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ಸಾಹಿತಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಎಂಜಿನಿಯರಿಂಗ್ ಪದವೀಧರರಾದ ನಿರೂಪ್ […]Read More

ಬಿಗ್ ಬಾಸ್ ಮನೆಗೆ ಎಂಟ್ರಿಕೊಡೋಕೆ ಕಾಫಿ ನಾಡು ಚಂದು ನಾನಾ ಕಸರತ್ತು: ವೈಲ್ಡ್

ನಾನು ಶಿವಣ್ಣ, ಪುನೀತ್ ಅಣ್ಣನ ಅಭಿಮಾನಿ ಎಂದು ಹೇಳುತ್ತ ಬರ್ತಡೇ ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರುವ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಹೋಗ್ಬೇಕು ಅನ್ನೋದು ಸಾಕಷ್ಟು ಮಂದಿಯ ಅಭಿಪ್ರಾಯವಾಗಿತ್ತು. ಆದರೆ ಬಿಗ್ ಬಾಸ್ ಮನೆಗೆ ಈಗಾಗ್ಲೆ 16 ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾಗಿ. ಚಂದು  ಬಿಗ್ ಬಾಸ್ ಮನೆಯೊಳಗೆ ಹೋಗದೆ ಇದ್ದಿದ್ದಕ್ಕೆ ಅಭಿಮಾನಿಗಳ ಬೇಸರ ವ್ಯಕ್ತಪಡಿಸಿದ್ರು. ಆದ್ರೆ ಚಂದ್ರು ಮಾತ್ರ ಸುಮ್ಮನ್ನೆ ಕೂತಿಲ್ಲ. ದೊಡ್ಮನೆ ಒಳಗೆ ಹೋಗಲು ಹೊಸ ಕಸರತ್ತು ಶುರು ಮಾಡಿದ್ದಾರೆ. ನನಗೆ […]Read More

ಬಾಲಿವುಡ್ ರಂಗೀನ್ ದುನಿಯಾದಲ್ಲಿ ಕನ್ನಡಿಗರ ಹವಾ…’ವೈ’ ಸಿನಿಮಾದ ಬೆಪನ್ಹಾ ಹಾಡಿಗೆ ಬಿಟೌನ್ ಮಂದಿ

ಕನ್ನಡಿಗರ ಹವಾ ಏನು ಅನ್ನೋದು ಈಗ ಇಡೀ ಇಂಡಿಯನ್ ಸಿನಿಮಾ ಲೋಕಕ್ಕೆ ಗೊತ್ತಿದೆ. ನಮ್ ಇಂಡಸ್ಟ್ರೀ ಮಂದಿಯನ್ನು ಪರಭಾಷೆಯವರು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸ್ತಿದ್ದಾರೆ. ಇಂತಹ ಟೈಮ್ ನಲ್ಲಿ ಕನ್ನಡದ ಯುವ ನಟ ಯುವನ್ ಹರಿಹರನ್ ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಹಿಂದಿ ಸಿನಿಮಾ ವೈ ಅಂಗಳದ ಬೆಪನ್ಹಾ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್ ಪ್ರಪಂಚದಲ್ಲಿ ಭಾರೀ ಸದ್ದು ಮಾಡ್ತಿದೆ. ಶಂಭು ಕುಮಾರ್ ಸಾಹಿತ್ಯ ಬರೆದಿರುವ ಆಯುಷಿ ಷಾ ಧ್ವನಿಯಾಗಿರುವ ಬೆಪನ್ಹಾ ಗಾನ ಲಹರಿ ಖ್ಯಾತ ನಿರ್ದೇಶಕಿ ಕಂ […]Read More

ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ಹೊಸಪೇಟೆಗೆ ಆಗಮಿಸಲಿರೋ ಸನ್ನಿ ಲಿಯೋನ್

ಬಾಲಿವುಡ್ ಹಾಟ್ ಬ್ಯೂಟಿ ಸಲ್ಲಿ ಲಿಯೋನ್ ಈಗಾಗ್ಲೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಸದ್ದು ಮಾಡಿದ್ದಾರೆ. ಇದೀಗ ಮತ್ತೆ ಸನ್ನಿಯನ್ನ ಕರೆತರೋಕೆ ರೆಡಿಯಾಗಿದ್ದಾರೆ. ಅಂದಹಾಗೆ ಸನ್ನಿ ಲಿಯೋನ್ ಈ ಭಾರಿ ಬರ್ತಿರೋದು ಸಿನಿಮಾಗಲ್ಲ ಬದಲಾಗಿ ಪ್ರಶಸ್ರಿ ಪ್ರಧಾನ ಮಾಡಲು.  ಸನ್ನಿಲಿಯೋನ್ ರಿಂದ ಪ್ರಶಸ್ತಿ ಸ್ವೀಕರಿಸ್ಬೇಕು ಅನ್ನೋ ಆಸೆ ಯಾರಿಗೆ ತಾನೇ ಇರಲ್ಲ. ಇದೀಗ ಅಂತದೊಂದು ಆಸೆ ಈಡೇರಿಸಲು ಹೊಸಪೇಟೆಯ ಕರುನಾಡ ಕ್ರಿಯಾಶೀಲ ಸಮಿತಿ ಮುಂದಾಗಿದೆ. ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ವಿಜಯನಗರ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ಕರುನಾಡ ಕ್ರಿಯಾಶೀಲ […]Read More

ಹಸೆಮಣೆ ಏರಲು ಸಜ್ಜಾದ ಕಮಲಿ ಧಾರವಾಹಿಯ ಮತ್ತೊಂದು ಜೋಡಿ  

ಕಳೆದೊಂದು ದಿನಗಳ ಹಿಂದಷ್ಟೇ ಕಮಲಿ ಧಾರವಾಹಿ ಖ್ಯಾತಿಯ ನಿಂಗಿ ಅಲಿಯಾಸ್ ಅಂಕಿತಾ ಹಸೆಮಣೆ ಏರಿದ್ದರು. ಈ ಬೆನ್ನಲ್ಲೇ ಈ ಧಾರವಾಹಿಯ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಕಮಲಿ ಧಾರವಾಹಿಯ ಅನಿಕಾ ಅಲಿಯಾಸ್ ಗೇಬ್ರಿಯೆಲಾ ಮತ್ತು ಶಂಬು ಅಲಿಯಾಸ್ ಸುಹಾಸ್ ಪರಸ್ಪರ ಪ್ರೀತಿಸುತ್ತಿದ್ದು ಇದೀಗ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕಮಲಿ ಧಾರವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಗೇಬ್ರಿಯೆಲಾ ಹಾಗೂ ಸುಹಾಸ್ ಮಧ್ಯೆ ಪ್ರೀತಿ ಶುರುವಾಗಿದ್ದು ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಸದ್ಯದಲ್ಲೇ ಈ […]Read More

Phone icon
Call Now
Reach us!
WhatsApp icon
Chat Now