• June 20, 2026

karnatakaspecial.in

https://karnatakaspecial.in/

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಧೃವಾ ಸರ್ಜಾ ದಂಪತಿ

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲೊಂದು ಸ್ಟಾರ್ ನಟ ಧೃವಾ ಸರ್ಜಾ ಹಾಗೂ ಪ್ರೇರಣಾ. 2019ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆ ಮಣೆ ಏರಿದ್ದ ಜೋಡಿಗಳು ಮೂರು ವರ್ಷದ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮಾರ್ಟೀನ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಧೃವಾ ಸರ್ಜಾ ಸದ್ಯ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಸಂತಸದಲ್ಲಿದ್ದಾರೆ. ಹೌದು. ಪ್ರೇರಣಾ ಹಾಗೂ ಧೃವಾ ಸರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಪ್ರೇರಣಾ ಜೊತೆ ಬೇಬಿ ಬಂಪ್ […]Read More

ರಮ್ಯಾ ಬ್ಯಾನರ್ ನಲ್ಲಿ ಮೊದಲ ಸಿನಿಮಾದ ಅವಕಾಶ ಪಡೆದುಕೊಂಡ ಸ್ಯಾಂಡಲ್ ವುಡ್ ಸ್ಟಾರ್

ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಯಾವಾಗ ಸಿನಿಮಾ ರಂಗಕ್ಕೆ ಬರ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿತ್ತು. ಇದೀಗ ನಿರ್ಮಾಪಕಿಯಾಗಿ ರಮ್ಯಾ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದು ಆ್ಯಪಲ್ ಬಾಕ್ಸ್ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಪ್ರೊಡಕ್ಷನ್ ಹೌಸ್ ಬಗ್ಗೆ ಮಾಹಿತಿ ನೀಡಿದ್ದ ರಮ್ಯಾ ಮೊದಲ ದಿನವೇ ಎರಡು ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಹೀಗಾಗಿ ರಮ್ಯಾ ಬ್ಯಾನರ್ ನಲ್ಲಿ ಯಾರು ಮೊದಲು ಸಿನಿಮಾ ಮಾಡುತ್ತಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದ್ದು ಇದೀಗ […]Read More

ಲೈಗರ್ ಸಿನಿಮಾದ ಬಳಿಕ ಕೈತಪ್ಪಿದ ಆಫರ್: ಸ್ಟಾರ್ ನಟನ ಸಿನಿಮಾದಿಂದ ಅನನ್ಯಾ ಪಾಂಡೆ

ಭಾರಿ ನಿರೀಕ್ಷೆಯೊಂದಿಗೆ ಇತ್ತೀಚೆಗೆ ತೆರೆಕಂಡ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೈಲೆಂಟ್ ಆಗಿ ಬಿಟ್ಟಿದೆ. ಮೊದಲ ದಿನವೇ ವಿಮರ್ಶಕರಿಂದ ಸೋತಿದ್ದ ಸಿನಿಮಾ ಬುಕ್ ಮೈ ಶೋ ರೇಟಿಂಗ್ ನಲ್ಲಿ 60ರ  ಗಡಿ ದಾಟಿಲ್ಲ.ಲೈಗರ್ ನೋಡಿ ಮೆಚ್ಚಿಕೊಂಡವರು ಕೇವಲ ವಿಜಯ್ ದೇವರಕೊಂಡ ನಟನೆಯನ್ನು ಮಾತ್ರವೇ. ಅಲ್ಲದೆ ವಿಜಯ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ನಟಿ ಅನನ್ಯಾ ಪಾಂಟೆ ನಟನೆಯನ್ನು ನೋಡಿದ ನಿರ್ಮಾಪಕರೇ ಬೆಚ್ಚಿ ಬಿದ್ದಿದ್ದು ಈ ಕಾರಣಕ್ಕೆ ಸ್ಟಾರ್ ನಟನೆ ಆಫರ್ ಕೂಡ ಕಳೆದುಕೊಂಡಿದ್ದಾರಂತೆ. ಬಾಲಿವುಡ್ ನಟ ಚಂಕಿ […]Read More

ಜಲ್ಸಾ ಸಿನಿಮಾದ ಸಂಭ್ರಮಾಚರಣೆ ವೇಳೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಥಿಯೇಟರ್ ಧ್ವಂಸ

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ನಿನ್ನೆ 51ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ನಟನೆಯ ಜಲ್ಸಾ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿತ್ತು. ಆದರೆ ಜಲ್ಸಾ ಸಿನಿಮಾದ ಸಂಭ್ರಮಾಚರಣೆ ವೇಳೆ ಪವನ್ ಅಭಿಮಾನಿಗಳು ಥಿಯೇಟರ್ ಅನ್ನು ಧ್ವಂಸಗೊಳಿಸಿದ್ದಾರೆ. ಜಲ್ಸಾ ಚಿತ್ರ 501 ಚಿತ್ರಮಂದಿರಗಳಲ್ಲಿ ಪ್ರದರ್ಶನ ನಡೆಯಬೇಕಿತ್ತು. ಆದರೆ ಕೆಲವು ಥಿಯೇಟರ್‌ಗಳಲ್ಲಿ ಅಶಿಸ್ತಿನ ವರ್ತನೆ ಮತ್ತು ವಿಧ್ವಂಸಕ ಕೃತ್ಯದ ನಂತರ, ಕೆಲವರು ಚಿತ್ರ ಪ್ರದರ್ಶನವನ್ನು ನಿಲ್ಲಿಸಿದರು. ಇದು ಅಭಿಮಾನಿಗಳಿಂದ ಹೆಚ್ಚು […]Read More

ಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ: ಶಾಸಕ ಜಮೀರ್ ಪುತ್ರ ಝೈದ್

ಇದುವರೆಗೂ ಬಾಲಿವುಡ್ ಸಿನಿಮಾಗಳಿಗೆ ತಟ್ಟಿದ್ದ ಬಾಯ್ಕಾಟ್ ಬಿಸಿ ಇದೀಗ ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟಿದೆ. ಶಾಸಕ ಜಮೀರ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಆದರೆ ಇದೀಗ ಸಿನಿಮಾವನ್ನು ಬಾಯ್ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಳೆದ ಕೆಲ ದಿನಗಳಿಂದ ಶಾಸಕ ಜಮೀರ್ ಖಾನ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದ್ದಾರೆ. ಚಾಮರಾಜ ಪೇಟೆಯ ಈದ್ಗಾ ಮೈದನಾದ ಬಗ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಪರವಾಹಿ ಬಹಿರಂಗ ಹೇಳಿಕೆ ನೀಡಿ ಸುದ್ದಿಯಾಗಿದ್ದ […]Read More

ಹೊಸ ಪ್ರಾಜೆಕ್ಟ್ ಘೋಷಿಸಿದ ನಟಿ ರಶ್ಮಿಕಾ ಮಂದಣ್ಣ: ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ ಪೋಸ್ಟರ್

ಕಿರಿಕ್ ಪಾರ್ಟಿ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಳಿಕ ತೆಲುಗಿನಲ್ಲಿ ಸದ್ದು ಮಾಡಿದ್ದ ನಟಿ ಇದೀಗ ಬಿಟೌನ್ ನಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಟನೆಯ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದು ಈ ಮಧ್ಯೆ ಹೊಸ ಪ್ರಾಜೆಕ್ಟ್ ಒಂದನ್ನು ರಶ್ಮಿಕಾ ಘೋಷಿಸಿದ್ದಾರೆ. ಪುಷ್ಪ ಸಿನಿಮಾದ ಬಳಿಕ ರಶ್ಮಿಕಾಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಬಾಲಿವುಡ್ ಸ್ಟಾರ್ ನಟರ ಜೊತೆ ಕೊಡಗಿನ ಬೆಡಗಿ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ರಶ್ಮಿಕಾ ನಟನೆಯ ಸಾಲು ಸಾಲು […]Read More

ಪುಣ್ಯಕೋಟಿ ರಾಯಭಾರಿಯಾದ ಕಿಚ್ಚ ಸುದೀಪ್: ಅಪ್ಪು ಹಾದಿಯಲ್ಲಿ ನಡೆದ ‘ಮಾಣಿಕ್ಯ’

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಕರುನಾಡ ಚಕ್ರವರ್ತಿ  ಕಿಚ್ಚ ಸುದೀಪ್ ಅವರನ್ನು ನೇಮಕ ಮಾಡಲಾಗಿದೆ. ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದಿದ್ದಾರೆ. ಪಶು ಸಂಗೋಪನೆ […]Read More

ಬಾಲಿವುಡ್ ಗೆ ಎಂಟ್ರಿಕೊಟ್ಟ ನಟಿ ಶಾನ್ವಿ ಶ್ರೀವಾಸ್ತವ್

2014ರಲ್ಲಿ ತೆರೆಕಂಡ ಚಂದ್ರಲೇಖಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಶಾನ್ವಿ ಶ್ರೀವಾಸ್ತವ್ ಬಳಿಕ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಸದ್ಯ ಶಾನ್ವಿ ನಟನೆಯ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದ್ದು ಈ ಮಧ್ಯೆ ಶಾನ್ವಿ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾದಲ್ಲಿ ನಟಿಸಿ ಮೋಡಿ ಮಾಡಿದ್ದ ಶಾನ್ವಿ ಇದೀಗ ಹಿಂದಿ ಆಲ್ಬಂ ಸಾಂಗ್ ಮೂಲಕ ಬಿಟೌನ್ ಗೆ ಲಗ್ಗೆ ಇಟ್ಟಿದ್ದಾರೆ. ಈಗಾಗ್ಲೆ ಕನ್ನಡ, ತೆಲುಗು ಹಾಗೂ […]Read More

49ರ ಹರೆಯದಲ್ಲೂ ಚಿರ ಯುವಕರು ನಾಚುವಂತಿದೆ ಸುದೀಪ್ ಫಿಟ್ ನೆಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಲಕ್ಷಾಂತರ ಹುಡುಗಿಯರ ಮನಸ್ಸು ಕದ್ದಿರೋ ಸುದೀಪ್ ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುದೀಪ್ ಗೆ  49 ವರ್ಷ ಅಂದರೆ ಯಾರು ಕೂಡ ನಂಬಲು ಸಾಧ್ಯವಿಲ್ಲ. ಇಂದಿಗೂ ಚಿರ ಯುವಕನಂತೆ ಕಂಗೊಳಿಸುವ ಸುದೀಪ್ ಸಖತ್ ಫಿಟ್ ಎಂಟ್ ಫೈನ್.ಸುದೀಪ್ ಫಿಟ್ ನೆಸ್ ವಿಚಾರದಲ್ಲಿ ಸಾಕಷ್ಟು ಮಂದಿಗೆ ಮಾದರಿಯಾಗಿದ್ದಾರೆ. 1973ರಲ್ಲಿ ಚಿತ್ರರಂಗಕ್ಕೆ ಬಂದ ಸುದೀಪ್ ಕನ್ನಡೆ ಜೊತೆಗೆ ತೆಲುಗು,ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ತಮ್ಮದೇ ಆದ ಚಾಪೂ […]Read More

ಕನ್ನಡದ ಮಾಣಿಕ್ಯನಿಗೆ ಬರ್ತಡೇ ಸಂಭ್ರಮ: ಅಭಿಮಾನಿಗಳಿಗೆ ಕೈ ಮುಗಿದ ಧನ್ಯವಾದ ಹೇಳಿದ ಸುದೀಪ್

ಇಂದು ನಟ ಕಿಚ್ಚ ಸುದೀಪ್ ಗೆ ಬರ್ತಡೇ ಸಂಭ್ರಮ.ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿರುವ ಮಾಣಿಕ್ಯನಿಗೆ ಕೋಟ್ಯಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಸಿನಿಮಾ ರಂಗದ ಕಲಾವಿದರು, ಅಭಿಮಾಣಿಗಳು ಸೇರಿದಂತೆ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾ ಮೂಲಕ ಸುದೀಪ್ ಗೆ ಶುಭ ಹಾರೈಸಿದ್ದಾರೆ. ಸುದೀಪ್ ಬರ್ತಡೇ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿಯಲ್ಲಿರುವ ಸುದೀಪ್ ಮನೆ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸುದೀಪ್ ಮನೆ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಮನೆ ಬಳಿ ಬಂದು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಅಭಿಮಾನಿಗಳನ್ನು ನೋಡಿ […]Read More

Phone icon
Call Now
Reach us!
WhatsApp icon
Chat Now