• June 2, 2026

ಕಳೆದ ವರ್ಷ ಇದೇ ದಿನ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಅಪ್ಪು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷವಾಗುತ್ತ ಬಂದಿದೆ. ಆದರೆ ಪ್ರತಿಯೊಬ್ಬ ಅಭಿಮಾನಿಯ ಮನಸಲ್ಲು ಅಪ್ಪು ಜೀವಂತವಾಗಿದ್ದಾರೆ. ಯಾವುದೇ ಶುಭ ಸಂದರ್ಭವಿದ್ದರು ಅಲ್ಲಿ ಅಪ್ಪು ಇದ್ದೆ ಇರುತ್ತಾರೆ ಅನ್ನೋ ನಂಬಿಕೆ ಅಭಿಮಾನಿಗಳದ್ದು. ಅಪ್ಪು ಅವರ ಪ್ರತಿಯೊಂದು ಮಾತು ಅಭಿಮಾನಿಗಳ ಮನಸಲ್ಲಿ ಅಚ್ಚಾಗಿ ಕೂತಿದೆ. ಈ ಹಿಂದೆ ಪುನೀತ್ ಹೇಳದ್ದ ಪ್ರತಿಯೊಂದು ಮಾತುಗಳು ಆಗಾಗ ವೈರಲ್ ಆಗುತ್ತನೆ ಇರುತ್ತದೆ. ಇದೀಗ ಕಳೆದ ವರ್ಷ ಇದೇ ದಿನ ಪುನೀತ್ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದು ಆ ಫೋಟೋಗಳು ಇದೀಗ ವೈರಲ್ ಆಗಿದೆ. ಕಳೆದ ವರ್ಷ ಇದೇ ದಿನ ಅಕ್ಟೋಬರ್ 26 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಅಪ್ಪು ಭೇಟಿ ನೀಡಿದ್ದರು. ದೇವರ ದರ್ಶಮದ ಅಳಿಕ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳೊಂದಿಗೆ ಕೆಲ ಕಾಲ ಮಾತು ಕತೆ ನಡೆಸಿದ್ದರು. ಇದೀಗ ಈ ಫೋಟೋಗಳು ವೈರಲ್ ಆಗಿದೆ. ನಿನ್ನೆ ತಾನೇ ಹಿಂದಿನ ದೀಪಾವಳಿಗೆ ಪುನೀತ್ ವಿಶ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now