• January 1, 2026

Tags : samadhi

ʻನೇತ್ರಾವತಿʼ ಧಾರವಾಹಿಯ 500 ಸಂಚಿಕೆ ಹಿನ್ನೆಲೆ: ಪುನೀತ್‌ ಪುಣ್ಯಭೂಮಿಗೆ ಪೂಜೆ

ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ʻನೇತ್ರಾವತಿʼ ಧಾರಾವಾಹಿ ತಂಡದ ಸದಸ್ಯರು ಇತ್ತೀಚೆಗೆ ಕಂಠೀರವ ಸ್ಟೂಡಿಯೋಗೆ ಭೇಟಿ ನೀಡಿ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ ಪುಣ್ಯಭೂಮಿಗೆ ಪೂಜೆ ಸಲ್ಲಿಸಿದರು. ಧಾರಾವಾಹಿಯ ಕಲಾವಿದರಾದ ಅಂಜಲಿ, ದುರ್ಗಾಶ್ರೀ, ಮಹೇಶ್‌, ಹೇಮಾ ನಾಡಿಗ್‌, ದೀಪಿಕಾ, ಸಚಿನ್‌, ಪಲ್ಲವಿ, ಮೋನಿಕಾ, ಮಾಲತಿ ಮೈಸೂರು, ಯತೀಶ್, ನಿರ್ದೇಶಕ ಸಂತೋಷ್‌ ಗೌಡ, ಛಾಯಾಗ್ರಾಹಕ ದಯಾಕರ್, ಸಂಕಲನಕಾರ ಗುರುಮೂರ್ತಿ ಹೆಗಡೆ ಮುಂತಾದವರು ಸಮಾಧಿಗೆ ಹೂ ಹಣ್ಣು, ಹಾರ ಅರ್ಪಿಸಿ ಪುನೀತ್‌ ಪುಣ್ಯಸ್ಮರಣೆ ಮಾಡಿಕೊಂಡರು. ಎಲ್ಲರೂ ಪುನೀತ್‌ ಚಿತ್ರವಿರುವ ಷರ್ಟ್‌ ಧರಿಸಿ ಅಭಿಮಾನ […]Read More

‘ಯುವರತ್ನ’ನಿಲ್ಲದೆ ಒಂದು ವರ್ಷ: 365 ದಿನವೂ ಕಣ್ಣೀರಲ್ಲೇ ಕಳೆದ ಅಭಿಮಾನಿಗಳು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷ ಕಳೆದಿದೆ. ಅಪ್ಪು ಇಲ್ಲದ ನೋವಿನಲ್ಲೆ 365 ದಿನ ಕಳೆದಿರೋ ಅಭಿಮಾನಿಗಳು ಇಂದು ನೋವು, ಕಣ್ಣೀರಿನ ನಡುವೆಯೇ ಮೊದಲ ವರ್ಷದ ಪುಣ್ಯ ತಿಥಿ ಆಚರಿಸುತ್ತಿದ್ದಾರೆ. ಅಪ್ಪು ಅವರ ಮೊದಲ ವರ್ಷದ ಪುಣ್ಯ ತಿಥಿ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 9 ಗಂಟೆಯ ಬಳಿಕ ಅಪ್ಪು ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಅಪ್ಪು ಇಷ್ಟ ಪಡುತ್ತಿದ್ದ ತಿಂಡ ತಿನಿಸುಗಳನ್ನು […]Read More

ಹಬ್ಬದ ನಡುವೆಯೂ ಅಪ್ಪು ಸಮಾಧಿಗೆ ಅಭಿಮಾನಿಗಳ ಭೇಟಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷ ಕಳೆಯುತ್ತ ಬಂದಿದೆ. ಆದರೆ ಇಂದಿಗೂ ಅದೆಷ್ಟೋ ಮಂದಿ ಅಪ್ಪು ನಮ್ಮ ನಡುವೆಯೇ ಇದ್ದಾರೆ ಎಂದುಕೊಂಡು ಜೀವನ ನಡೆಸುತ್ತಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವೆ ಇಲ್ಲ ಎನ್ನುವಂತಾಗಿದೆ. ಅಪ್ಪು ನಿಧನರಾದಾಗ ಲಕ್ಷಾಂತರ ಮಂದಿ ಮೃತ ದೇಹದ ದರ್ಶನ ಪಡೆದಿದ್ದರು. ಆ ಬಳಿಕ ನಿತ್ಯ ಅಪ್ಪ ಸಮಾಧಿಗೆ ಸಾವಿರಾರು ಮಂದಿ ಭೇಟಿ ನೀಡಿ ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ದೂರುದ ಊರುಗಳಿಂದ ವಾಹನಗಳನ್ನು ಮಾಡಿಕೊಂಡು ಬಂದು […]Read More

ಪುನೀತ್ ರಾಜ್ ಕುಮಾರ್ ಪುಣ್ಯ ಭೂಮಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ

ಟಾಲಿವುಡ್ ನಟ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಲೈಗರ್ ಸಿನಿಮಾ ಬಿಡುಗಡೆಗೆ ಕೆಲವೇ ಕೆಲವು ದಿನಗಳು ಮಾತ್ರ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಂದು ಸಿನಿಮಾದ ಪ್ರಚಾರದ ಸಲುವಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿದೆ. ಈ ವೇಳೆ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಪುನೀತ್ ರಾಜ್ ಕುಮಾರ್ ಪುಣ್ಯ ಭೂಮಿಗೆ ಭೇಟಿ ನೀಡಿದ್ದಾರೆ.  ಪುನೀತ್ ರಾಜ್ ಕುಮಾರ್ ನಿಧನರಾಗಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಅಭಿಮಾನಿಗಳ ಮನಸ್ಸಲ್ಲಿ […]Read More

Phone icon
Call Now
Reach us!
WhatsApp icon
Chat Now