• January 2, 2026

ಕೆಂಡಸಂಪಿಗೆಯಲ್ಲಿ ರಾಜೇಶ್ ಪಾತ್ರ ಸಾವು: ಬಿಗ್ ಬಾಸ್ ಗೆ ಬರ್ತಿದ್ದಾರೆ ಶನಿ ಪಾತ್ರಧಾರಿ

ಬಿಗ್ ಬಾಸ್ ಸೀಸನ್ 9ಕ್ಕೆ ಇನ್ನೂ ಒಂದೇ ಒಂದು ದಿನ ಮಾತ್ರವೇ ಭಾಕಿ ಇದೆ. ಹೀಗಾಗಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರ್ತಾರೆ ಅನ್ನೋ ಕುತೂಹಲ ಕ್ರಿಯೇಟ್ ಆಗಿದೆ. ಸದ್ಯ ಬಿಗ್ ಬಾಸ್ ಸೀಸನ್ 9ರಲ್ಲಿ ಕಿರುತೆರೆ ನಟ ರಾಜೇಶ್ ಬರ್ತಿದ್ದು ಈ ಕಾರಣಕ್ಕೆ ಇವರು ನಟಿಸುತ್ತಿದ್ದ ಪಾತ್ರವನ್ನು ದಿಡೀರ್ ಎಂದು ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರವಾಹಿ ಕೆಂಡಸಂಪಿಗೆಯ ಪಾತ್ರಧಾರಿ ರಾಜೇಶ್ ನನ್ನು ದಿಡೀರ್ ಎಂದು ಸಾಯಿಸಲಾಗಿದೆ. ಕಥಾ ನಾಯಕಿಯ ತಮ್ಮನಾಯಿ ರಾಜೇಶ್ ಸಾಕಷ್ಟು ಖ್ಯಾತಿ ಘಳಿಸಿದ್ದು ಈ ಪಾತ್ರದ ಮೂಲಕ ರಾಜೇಶ್ ಸಾಕಷ್ಟು ಗುರುತಿಸಿಕೊಂಡಿದ್ದರು. ಆದರೆ ದಿಡೀರ್ ಎಂದು ರಾಜೇಶ್ ಪಾತ್ರಧಾರಿಯನ್ನು ಕೊಲೆ ಮಾಡಿರುವುದು ಅಭಿಮಾನಿಗಳಿಗೆ ನೋವಾಗಿದೆ. ಕೆಂಡಸಂಪಿಗೆಯಲ್ಲಿ ರಾಜೇಶ್ ಪಾತ್ರವನ್ನು ನಿಭಾಯಿಸುತ್ತಿದ್ದ ನಟ ಸುನೀಲ್ ಇದೀಗ ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಾರೆ.ಇದೇ ಕಾರಣಕ್ಕೆ ತರಾತುರಿಯಲ್ಲಿ ರಾಜೇಶ್ ಪಾತ್ರವನ್ನು ಕೊಲೆ ಮಾಡಲಾಗಿದೆ. ಶನಿ ಧಾರಾವಾಹಿಯ ಮೂಲಕ ಫೇಮಸ್ ಆದ ಸುನೀಲ್ ಕೆಂಡಸಂಪಿಗೆ ಧಾರವಾಹಿಯಲ್ಲಿ ತಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಸುನೀಲ್ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದೀಗ ಸುನೀಲ್ ಪಾತ್ರ ಕೊನೆಯಾಗಿರೋ ಕಾರಣಕ್ಕೆ ಸುನೀಲ್ ಬಿಗ್ ಬಾಸ್ ಮನೆಗೆ ಹೋಗೋದು ಕನ್ಪಾರ್ಮ್ ಆಗಿದೆ. ನಟ ಸುನೀಲ್ ಜೊತೆ ನಟಿ ಪ್ರೇಮಾ, ನವೀನ್ ಕೃಷ್ಣ, ಸರಿಗಮಪ ಖ್ಯಾತಿಯ ಆಶಾ ಭಟ್ ಸೇರಿದಂತೆ ಇನ್ನೂ ಸಾಕಷ್ಟು ಮಂದಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now