• January 1, 2026

“ಶ್ರೀಪ್ರಸನ್ನ ವೆಂಕಟದಾಸರು’ ಚಿತ್ರದ ಆಡಿಯೋ ರಿಲೀಸ್

ಕರ್ನಾಟಕದ ದಾಸ ಸಾಹಿತ್ಯ ಪರಂಪರೆಯಲ್ಲಿ ತಮ್ಮ ಕೀರ್ತನೆಗಳ ಮೂಲಕ, ಪ್ರಸಿದ್ಧರಾಗಿರುವ ದಾಸಶ್ರೇಷ್ಠರಲ್ಲಿ ಪ್ರಸನ್ನ ವೆಂಕಟದಾಸರು ಪ್ರಮುಖರು. ರಾಯಚೂರು ಮೂಲದ ಪ್ರಸನ್ನ ವೆಂಕಟದಾಸರ ಜೀವನ ಮತ್ತು ಸಾಧನೆ ಆಧಾರಿತವಾಗಿರುವ ಈ ಚಿತ್ರ, ‘ಶ್ರೀಪ್ರಸನ್ನ ವೆಂಕಟದಾಸರು’ ಎಂಬ ಹೆಸರಿನಲ್ಲಿ  ಬೆಳ್ಳಿತೆರೆಗೆ ಬರುತ್ತಿದೆ. ವಿಜಯ್ ಕೃಷ್ಣ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಬಿಡುಗಡೆ ‌ಸಮಾರಂಭ ಇತ್ತೀಚಿಗೆ ನಡಯಿತು. ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ , ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಅನೇಕ ಗಣ್ಯರು ಮತ್ತು ಚಿತ್ರದ ಕಲಾವಿದರು, ತಂತ್ರಜ್ಞರು ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.  ‘ಮಾತಾಂಬುಜಾ ಮೂವೀಸ್’ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಶ್ರೀ ಪ್ರಸನ್ನ ವೆಂಕಟದಾಸರು’ ಚಿತ್ರಕ್ಕೆ ಡಾ. ಮಧುಸೂದನ ಹವಾಲ್ದಾರ್ ನಿರ್ದೇಶನವಿದೆ. ಸದ್ದಿಲ್ಲದೆ ಈಗಾಗಲೇ ‘ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರ ಪೋಸ್ಟ್‌ ಪ್ರೊಡಕ್ಷನ್ಸ್ ಹಂತದಲ್ಲಿದೆ. ಇದೇ ವೇಳೆ ಮಾತನಾಡಿದ ನಿರ್ದೇಶಕ ಮಧುಸೂದನ್ ಹವಾಲ್ದಾರ್, ‘ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ಪ್ರಸನ್ನ ವೆಂಕಟದಾಸರದ್ದು ಮೇರು ವ್ಯಕ್ತಿತ್ವ. ಅವರ ಜೀವನವನ್ನು ಪರಿಚಯಿಸುವ ಸಲುವಾಗಿ ಈ ಸಿನಿಮಾ ಮಾಡಿದ್ದೇವೆ. ಸಿನಿಮಾದ ಗೀತೆಗಳಲ್ಲೂ ಪ್ರಸನ್ನ ವೆಂಕಟದಾಸರ ಕೀರ್ತನೆಗಳನ್ನೇ ಬಳಸಿಕೊಳ್ಳಲಾಗಿದೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ನವೆಂಬರ್ ವೇಳೆಗೆ ‘ಪ್ರಸನ್ನ ವೆಂಕಟದಾಸರು’ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ’ ಎಂದು ಮಾಹಿತಿ ನೀಡಿದರು. ಶ್ರೀಪ್ರಸನ್ನ ವೆಂಕಟದಾಸರು’ ಚಿತ್ರಕ್ಕೆ ಡಾ. ರೇಖಾ ಕಾಖಂಡಕಿ ಚಿತ್ರಕಥೆ, ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ವಿಜಯಕೃಷ್ಣ ಡಿ. ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ನಾರಾಯಣ ಸಿ. ಛಾಯಾಗ್ರಹಣ ಹಾಗೂ ಆರ್. ದೊರೈರಾಜ್ ಅವರ ಸಂಕಲನವಿದೆ. ಪ್ರಭಂಜನ ದೇಶಪಾಂಡೆ, ವಿಜಯಾನಂದ ನಾಯಕ,‌ ಲಕ್ಷ್ಮೀ ಶ್ರೇಯಾಂಶಿ, ಸ್ವಾಮಿರಾವ್ ದೇಸಾಯಿ, ವಿಷ್ಣುತೀರ್ಥ ಜೋಶಿ, ಶರತ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now