ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಈ ವೇದಿಕೆ ಮೇಲೆ ನಿಂತಿದ್ದೇನೆ ಎಂದರೆ ಅದಕ್ಕೆ ಡಾ.ರಾಜ್ ಕುಮಾರ್ ಕುಟುಂಬವೇ ಕಾರಣ: ರಮ್ಯಾ
ಇನ್ನೂ ನನಗೆ ಅಷ್ಟಾಗಿ ಡ್ಯಾನ್ಸ್ ಬರುತ್ತಿರಲಿಲ್ಲ. ಅಪ್ಪು ನನಗೆ ಸಲಹೆ ನೀಡುತ್ತಿದ್ದರು. ನನ್ನ ಕೋ ಸ್ಟಾರ್ ನನಗೆ ತುಂಬಾ ಬೆಂಬಲ ನೀಡಿದ್ದಾರೆ. ನಾನು ಇಂದು ಈ ವೇದಿಕೆಯಲ್ಲಿ ನಿಂತಿದ್ದೇನೆ ಅಂದ್ರೆ ಅದಕ್ಕೆ ಡಾ.ರಾಜ್ಕುಮಾರ್ ಕುಟುಂಬವೇ ಕಾರಣ ಎಂದರು.
ಅಪ್ಪು ಕುಟುಂಬದ ಧೀರೇನ್, ಯುವ, ಡಿಂಪಿ, ಅಮ್ಮುನ ನೋಡಿದಾಗ ಖುಷಿಯಾಗುತ್ತದೆ. ಏಲ್ಲೋ ಒಂದು ಕಡೆ ಅಪ್ಪುನ ಮಿಸ್ ಮಾಡಿಕೊಂಡರೂ ಕೂಡ ಅವರ ಫ್ಯಾಮಿಲಿ ಮತ್ತು ಅಭಿಮಾನಿಗಳ ಮೂಲಕ ಅಪ್ಪು ಬದುಕಿದ್ದಾರೆ ಎಂದು ಅನಿಸುತ್ತದೆ ಎಂದು ರಮ್ಯಾ ಹೇಳಿದರು.
ಪುನೀತ್ ರಾಜ್ ಕುಮಾರ್ ರ ಕನಸಿನ ಪ್ರಾಜೆಕ್ಟ್ ಆಗಿದ್ದ ಗಂಧದ ಗುಡಿ ಚಿತ್ರ ಇದೇ ಅ.28ರಂದು ಅದ್ದೂರಿಯಾಗಿ ತೆರೆ ಮೇಲೆ ಬರ್ತಿದೆ. ಅದಕ್ಕೂ ಮೊದಲು ದೊಡ್ಮನೆ ಕುಟುಂಬ ಸಿನಿಮಾ ರಂಗ ಹಾಗೂ ಅಭಿಮಾನಿಗಳಿಗಾಗಿ ಪ್ರೀರಿಲೀಸ್ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಅಪ್ಪು ಗುಣಗಾನ ಮಾಡಿದರು.
