• March 14, 2026

ಸುದೀಪ್ ಎಚ್ಚರಿಕೆ ಮಾತಿನ ಬಳಿಕ ಸಾನ್ಯಾರಿಂದ ದೂರವಾದ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಓಟಿಟಿಯಲ್ಲಿ ಸಖತ್ ಖ್ಯಾತಿ ಘಳಿಸಿ ಬಳಿಕ ಬಿಗ್ ಬಾಸ್ ಸೀಸನ್ 9ರಲ್ಲೂ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿರುವ ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಮಧ್ಯೆ ಬಿರುಕು ಮೂಡಿದೆ. ಸದಾ ಕೈ ಕೈ ಹಿಡಿದು ಸುತ್ತಾಡುತ್ತಿದ್ದ ಜೋಡಿ ಹಕ್ಕಿಗಳು ಇದೀಗ ನಾನೊಂದು ತೀರಾ ನೀನೊಂದು ತೀರಾ ಅಂತಿದ್ದಾರೆ. ಇದಕ್ಕೆಲ್ಲಾ ಕಾರಣ ಸುದೀಪ್ ರ ಖಡಕ್ ವಾರ್ನಿಂಗ್. ರೂಪೇಶ್ ಹಾಗೂ ಸಾನ್ಯಾ ಬಿಗ್ ಬಾಸ್ ಓಟಿಟಿಯಲ್ಲಿ ಇದ್ದಷ್ಟು ದಿನವೂ ಸಖತ್ ಅನ್ಯೋನ್ಯವಾಗಿದ್ದರು. ಅದು ಟಿವಿ ಸೀಸನ್ ನಲ್ಲೂ ಮುಂದುವರೆದಿದೆ. ಹೋದಲ್ಲಿ ಬಂದಲ್ಲೆಲ್ಲಾ ಕೈ ಕೈ ಹಿಡಿದುಕೊಂಡ ಓಡಾಡುತ್ತಿದ್ದ ರೂಪೇಶ್ ಹಾಗೂ ಸಾನ್ಯಾ ಮಾತ್ರ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡೇ ಬರ್ತಿದ್ದಾರೆ. ಆದರೆ ಇತ್ತೀಚೆಗೆ ಇಬ್ಬರು ನಡುವಿನ ಕ್ಲೋಸ್ ನೆಸ್ ಮತ್ತಷ್ಟು ಹೆಚ್ಚಾಗಿದೆ. ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ರೂಮ್ ನಲ್ಲಿ ರೂಪೇಶ್ ಶೆಟ್ಟಿ ಮೈಮೇಲೆ ಸಾನ್ಯ ಅಯ್ಯರ್  ಮಲಗಿಕೊಂಡಿದ್ದರು. ರೂಪೇಶ್ ಶೆಟ್ಟಿ ತಮ್ಮ ತೊಳಿನಿಂದ ಸಾನ್ಯ ಅಯ್ಯರ್ ಅನ್ನು ಬಿಗಿದಪ್ಪಿದ್ದರು. ಇದನ್ನು ಬಿಗ್ ಬಾಸ್ ನೋಟಿಸ್ ಮಾಡಿದ್ದರು. ಬಳಿಕ ವಾರದ ಕೊನೆಯಲ್ಲಿ ಸುದೀಪ್ ಅವರ ವರ್ತನೆಗೆ ಖಡಕ್ ಎಚ್ಚರಿಕೆ ನೀಡಿದ್ದರು. ಬಳಿಕ ಇಬ್ಬರಿಗೂ ಸಮಾಧಾನ ಮಾಡಿದ್ದ ಸುದೀಪ್ ಕೆಲಸದ ಕಡೆ ಗಮನ ಹರಿಸುವಂತೆ ಸೂಚಿಸಿದ್ದರು. ಸುದೀಪ್ ಎಚ್ಚರಿಕೆ ನೀಡಿದ ಬಳಿಕ ರೂಪೇಶ್ ಸಾನ್ಯಾರಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದಾ ಸಾನ್ಯಾ ಜೊತೆಯೇ ಕೂತು ಊಟ ಮಾಡುತ್ತಿದ್ದ ರೂಪೇಶ್ ಇದೀಗ ಬೇರೆಯೇ ಕೂಡ ಊಟ ಮಾಡ್ತಿದ್ದಾರೆ. ರೂಪೇಶ್ ಜೊತೆ ಊಟ ಮಾಡಲು ಸಾನ್ಯಾ ಕಾಯುತ್ತಿದ್ದರು ರೂಪೇಶ್ ಮಾತ್ರ ಹೋಗಿಲ್ಲ. ಈ ರೀತಿ ಮಾಡಬೇಡಿ ಎಂದು ಸಾನ್ಯಾ ಕೇಳಿಕೊಂಡರು ರೂಪೇಶ್ ಮಾತ್ರ ಸೈಲೆಂಟ್ ಆಗಿದ್ದಾರೆ. ಸುದೀಪ್ ರ ಎಚ್ಚರಿಕೆಯ ಮಾತುಗಳಿಂದ ರೂಪೇಶ್ ಸಾನ್ಯಾರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now