ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಾಂತಾರ ನೋಡಲು ಹೋಗಿದ್ದ ವಾಸುಕಿ ವೈಭವ್ ಹಾಗೂ ಗುಂಪಿನ ನಡುವೆ ಗಲಾಟೆ
ಸಿನಿಮಾ ನೋಡುತ್ತ ಕುಳಿತಿದ್ದ ವಾಸುಕಿ ವೈಭವ್ ಮುಂದಿನ ಸೀಟ್ ನಲ್ಲಿ ನಾಲ್ಕೈದು ಜಗರಿದ್ದ ಗುಂಪು ಬಂದಿದೆ. ಈ ವೇಳೆ ಸಿನಿಮಾ ಶುರುವಾಗಿದ್ದು ಬೇಗ ಹೋಗಿ ಕುಳಿತುಕೊಳ್ಳುವಂತೆ ವಾಸುಕಿ ಸ್ನೇಹಿತ ದರ್ಶನ್ ಹೇಳಿದ್ದಾರೆ. ಇದರಿಂದ ಕೋಪಗೊಂಡ ಗುಂಪು ವಾಸುಕಿ ವೈಭವ್ ಹಾಗೂ ಸ್ನೇಹಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಇದರಿಂದ ಕೋಪಗಪಂಡ ವಾಸಕಿ ವೈಭವ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಅಷ್ಟು ಮಂದಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ, ವಾಸುಕಿ ವೈಭವ್ ಕೇಸ್ ದಾಖಲಿಸುವುದು ಬೇಡ ಎಂಬ ಕ್ಷಮೆ ಕೇಳಿದರೆ ಸಾಕು ಎಂದಿದ್ದಾರೆ, ಹೀಗಾಗಿ ಗಲಾಟೆ ಮಾಡಿದ ಗುಂಪು ವಾಸಕಿ ವೈಭವ್ ಹಾಗೂ ಸ್ನೇಹಿತೆಯ ಬಳಿ ಕ್ಷಮೆ ಯಾಚಿಸಿದೆ. ಬಳಿಕ ಎರಡು ಕಡೆಯವರಿಗೆ ಸಮಾಧಾನ ಮಾಡಿ ಪೊಲೀಸರು ಕಳುಹಿಸಿದ್ದಾರೆ.
