• March 14, 2026

ಕೋಟಿ ಖರ್ಚಾದರೂ ಪರವಾಗಿಲ್ಲ, ನಾನಿದ್ದೀನಿ: ಹರೀಶ್ ರಾಯ್ ಚಿಕಿತ್ಸೆಗೆ ಭರವಸೆ ನೀಡಿದ ಸ್ಯಾಂಡಲ್ ವುಡ್ ಸ್ಟಾರ್ ನಟ

ಕನ್ನಡದ ಖ್ಯಾತ ಖಳನಟ ಹರೀಶ್ ರಾಯ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕೆಲ ಕಾಲ ಸಿನಿಮಾ ರಂಗದಿಂದ ದೂರವಿದ್ದು ಹರೀಶ್ ರಾಯ್ ಕೆಜಿಎಫ್ ಸಿನಿಮಾದ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಆದರೆ ಇದೀಗ ಹರೀಶ್ ರಾಯ್ ಗೆ ಮತ್ತೆ ಸಂಕಷ್ಟು ಎದುರಾಗಿದೆ. ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರಾಯ್ ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್ ಕೊನೆಯ ಹಂತದಲ್ಲಿದ್ದು ಸಂದರ್ಶನವೊಂದರಲ್ಲಿ ಹರೀಶ್ ರಾಯ್ ಈ ಕುರಿತು ಬಾಯಿ ಬಿಟ್ಟಿದ್ದಾರೆ. ಹರೀಶ್ ರಾಯ್ ಆರೋಗ್ಯದ ಕುರಿತು ತಿಳಿದುಕೊಂಡ ಸಾಕಷ್ಟು ಮಂದಿ ಕರೆ ಮಾಡಿದ್ದು ಸಹಾಯ ಹಸ್ತ ನೀಡಿದ್ದಾರೆ. ಅವುಗಳಲ್ಲಿ ವಿಶೇಷವಾದ ಕರೆಯೂ ಬಂದಿದೆ. ಹರೀಶ್ ಗೆ ಕ್ಯಾನ್ಸರ್ ಇರುವ ವಿಷಯ ತಿಳಿದು ಸಿನಿಮಾ ರಂಗದ ಸಾಕಷ್ಟು ಮಂದಿ ಕರೆ ಮಾಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೆ ಅವರಿಗೆ ಬಂದಿರುವ ವಿಶೇಷ ಕರೆಯ ಬಗ್ಗೆ ಮಾತನಾಡಿರುವ ಹರೀಶ್ ರಾಯ್, “ಅಂದು ರಾತ್ರಿ 12 ಗಂಟೆಗೆ ಒಂದು ಕರೆ ಬಂತು. ಅವರು ಕನ್ನಡದ ದೊಡ್ಡ ನಟ, ದೊಡ್ಡ ಹೆಸರು ಮಾಡಿದವರು. ನಾವಿದ್ದೀವಲ್ಲಾ, ಒಂದು ಮಾತು ಹೇಳಬಹುದಿತ್ತಲ್ಲ. ನನ್ನ ಪರ್ಸನ್ ನಂಬರ್ ನಿಮಗೆ ಕೊಟ್ಟಿದ್ದೇನೆ. ನೀವು ಕರೆ ಮಾಡಿ ಮಾತಾಡಿ. ಚಿಕಿತ್ಸೆಗೆ ಕೋಟಿ ಖರ್ಚಾದರೂ ಪರ್ವಾಗಿಲ್ಲ, ನಾನು ನೋಡಿಕೊಳ್ಳುತ್ತೇನೆ. ಆದರೆ ಈ ವಿಚಾರ ಎಲ್ಲೂ ಹೇಳಬೇಡಿ” ಎಂದು ಭರವಸೆ ಕೊಟ್ಟಿದ್ದಾರೆ ಎಂದು ಹರೀಶ್ ಹೇಳಿದ್ದಾರೆ. ಆದರೆ ಆ ನಟ ಯಾರು ಅನ್ನೋದನ್ನು ಮಾತ್ರ ಹರೀಶ್ ರಾಯ್ ಹೇಳಿಲ್ಲ. ಆದರೂ ಹರೀಶ್ ರಾಯ್ ಗೆ ಸಹಾಯ ಮಾಡಲು ಮುಂದೆ ಬಂದಿರುವ ನಟ ಬೇರಾರು ಅಲ್ಲ ರಾಕಿಂಗ್ ಸ್ಟಾರ್ ಯಶ್ ಎಂಬ ಮಾತುಗಳು ಕೇಳಿ ಬರುತ್ತಿದೆ. ಹರೀಶ್ ರಾಯ್ ಹಾಗೂ ಯಶ್ ಕೆಜಿಎಫ್ 2 ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಮಧ್ಯೆಯೂ ಉತ್ತಮ ಬಾಂದವ್ಯ ಇದ್ದು ಇದೀಗ ಯಶ್ ಹರೀಶ್ ರಾಯ್ ನೆರವಿಗೆ  ನಿಂತಿದ್ದಾರೆ ಎನ್ನಲಾಗುತ್ತಿದೆ. ಸಂದರ್ಶನದ ವೇಳೆ ಹರೀಶ್ ರಾಯ್ ಅವರ ಫೋನ್ ನಂಬರ್ ಕೂಡ ನೀಡಿದ್ದಾರೆ. 9606960656 ಈ ನಂಬರ್‌ಗೆ ಹಣ ಹಾಕುವ ಮೂಲಕ ನೀವೂ ಕೂಡ ಅವರಿಗೆ ಸಹಾಯ ಮಾಡಬಹುದಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now