ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮುಂದಿನ ದಿನಗಳಲ್ಲಿ ಸುದೀಪ್ ಜೊತೆ ಸಿನಿಮಾ ಮಾಡಬಹುದು: ನಟಿ ರಮ್ಯಾ
ಅಂದ ಹಾಗೆ ರಮ್ಯಾ ಹಾಗೂ ಪುನೀತ್ ರಾಜ್ ಕುಮಾರ್ ಮತ್ತೆ ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ಅಪ್ಪು ಸಿನಿಮಾದ ಮೂಲಕ ರಮ್ಯಾ ಕಂಬ್ಯಾಕ್ ಮಾಡೋ ಪ್ಲಾನ್ ಇತ್ತು. ಈ ಬಗ್ಗೆ ರಮ್ಯಾ ಹಾಗೂ ಪುನೀತ್ ರಾಜ್ ಕುಮಾರ್ ಮಾತನಾಡಿಕೊಂಡಿದ್ದರು. ಆದರೆ ಅದು ಸಾಧ್ಯವಾಗಲೆ ಇಲ್ಲ. ಇದೀಗ ಮುಂದಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರ ಜೊತೆಯೂ ನಟಿಸಬಹುದು ಎಂದು ಹೇಳಿ ಕುತೂಹಲ ಹೆಚ್ಚಿಸಿದ್ದಾರೆ.
ಅಂದಹಾಗೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಿರುವ ಕುರಿತು ಭಯ ಹಾಗೂ ಎಗ್ಸೈಟ್ ಮೆಂಟ್ ಎರಡು ಇದೆ. ಲಾಕ್ ಡೌನ್ ಸಂದರ್ಭದಲ್ಲಿ ರಮ್ಯಾ ಸಾಕಷ್ಟು ಕಥೆಯನ್ನು ಕೇಳಿದ್ದರು. ಆದ್ರೆ ರಾಜ್ ಬಿ ಶೆಟ್ಟಿ ಹೇಳಿದ ಕಥೆ ರಮ್ಯಾಗೆ ಸಖತ್ ಇಷ್ಟವಾಗಿದೆ. ಅಲ್ಲದೆ ಚಿತಕ್ಕೆ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಟೈಟಲ್ ಕೂಡ ರಾಜ್ ಬಿ ಶೆಟ್ಟಿಯೇ ನೀಡಿದ್ದಾರೆ. ಕಥೆ, ಟೈಟಲ್ ಎರಡು ಇಷ್ಟವಾಗಿದ್ದು ಈ ಸಿನಿಮಾದ ಮೂಲಕ ರಮ್ಯಾ ಕಂಬ್ಯಾಕ್ ಮಾಡ್ತಿದ್ದಾರೆ.
ಮೋಹಕತಾರೆಯನ್ನು ಮತ್ತೆ ತೆರೆ ಮೇಲೆ ನೋಡ್ಬೇಕು ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಆಸೆ. ಆದಷ್ಟು ಬೇಗ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕಂಪ್ಲೀಟ್ ಆಗಿ ತೆರೆ ಮೇಲೆ ಬರಲಿ ಅಂತಿದ್ದಾರೆ ರಮ್ಯಾ ಅಭಿಮಾನಿಗಳು.
