• June 13, 2026

ಜೈಲಿನಿಂದ ಹೊರ ಬಂದ ಖೈದಿಗಳಿಗೆ ಗುಡ್ ನ್ಯೂಸ್

ಜೈಲಿನಿಂದ ಬಿಡುಗಡೆ ಆದ ಹೊರ ಬರುವ ಖೈದಿಗಳಿಗೆ ಮುಂದಿನ ಭವಿಷ್ಯ ಏನು ಎಂಬ ಚಿಂತೆ ಇದ್ದೇ ಇರುತ್ತದೆ. ಒಮ್ಮೆ ಜೈಲಿಗೆ ಹೋಗಿ ಹೊರ ಬಂದರೆ ಅಂತವರಿಗೆ ಕೆಲಸ ನೀಡಲು ಹಿಂದೇಟು ಹಾಕುವವರೇ ಹೆಚ್ಚು. ಇದೀಗ ಜೈಲಿನಿಂದ ಹೊರ ಬಂದ ಖೈದಿಗಳಿಗೆ ಕೆಲಸ ಕೊಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ನಡೆಸುವ ಧಾರಿಯನ್ನು ಅಧಿಕಾರಿಗಳು ಕಲ್ಪಿಸಿ ಕೊಡುತ್ತಿದ್ದಾರೆ. ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬಂದ ಖೈದಿಗಳಿಗೆ ಕೆಲಸ ನೀಡಲು ಯಾರು ರೆಡಿ ಇರುವುದಿಲ್ಲ. ಹೀಗಾಗಿ ಖೈದಿಗಳು ಮತ್ತೆ ಹಳೆ ಚಾಳಿಯೇ ಮುಂದುವರೆಸುತ್ತಾರೆ. ಆ ಕಾರಣಕ್ಕೆ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬಂದವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕೆಲಸಕ್ಕೆ ಜೈಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿರುವಾಗ ಸೌಜನ್ಯದಿಂದ ವರ್ತನೆ ಮಾಡಿರುವ ಹಾಗೂ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಹೊರ ಬರುವ ಕೈದಿಗಳಿಗೆ ಉದ್ಯೋಗಾವಶವನ್ನ ಕಲ್ಪಿಸಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಜೈಲಿನ ಹಿರಿಯ ಅಧಿಕಾರಿಗಳು ಪೆಟ್ರೋಲಿಯಂ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ ಸಂಸ್ಥೆ ಸೇರಿದಂತೆ ಎರಡು ಮೂರು ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜೈಲಿನಿಂದ ಹೊರ ಬರುವ ಖೈದಿಗಳಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಕೆಲಸ ಕೊಡಿಸಲು ಜೈಲಿನ ಅಧಿಕಾರಿಗಳು ನಿರ್ಧರಿಸಿದ್ದಾರೆ. ಒಟ್ನಲ್ಲಿ ಜೈಲಿನಿಂದ ಸನ್ನಡತೆ ಆಧಾರದಲ್ಲಿ ಹೊರ ಬಂದ ಖೈದಿಗಳು ಮತ್ತೆ ಹಳೆ ಚಾಳಿ ಮುಂದುವರೆಸದೆ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಜೈಲಿನ ಅಧಿಕಾರಿಗಳು ಮುಂದಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now