• January 1, 2026

ರಣವೀರ್ ಸಿಂಗ್ ಕುರಿತು ಐದು ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಶಾರುಖ್ ಖಾನ್

ಇಷ್ಟು ದಿನಗಳ ಕಾಲ ವಿಭಿನ್ನವಾಗಿ ಡ್ರಸ್ ಧರಿಸಿ ಸುದ್ದಿಯಾಗುತ್ತಿದ್ದ ನಟ ರಣವೀರ್ ಸಿಂಗ್ ಇದೀಗ ಬಟ್ಟೆ ಇಲ್ಲದೆ ಸುದ್ದಿಯಾಗುತ್ತಿದ್ದಾರೆ. ಮ್ಯಾಗಜೀನ್ ಒಂದಕ್ಕೆ ನ್ಯೂಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡು ಸಾಕಷ್ಟು ವಿವಾದ ಸೃಷ್ಟಿಸಿದ್ದಾರೆ. ಸದ್ಯ ರಣವೀರ್ ವಿರುದ್ಧ ಎನ್ ಜಿ ಒ ಸಂಸ್ಥೆಯೊಂದು ದೂರು ನೀಡಿದ್ದು, ಇದರ ಅನ್ವಯ ರಣವೀರ್ ವಿರುದ್ಧ ಕೇಸು ದಾಖಲಾಗಿದೆ. ಈ ಮಧ್ಯೆ ಸಂದರ್ಶನವೊಂದಲ್ಲಿ ಶಾರುಖ್ ಖಾನ್ ಹೇಳಿದ ಮಾತೊಂದು ಸುದ್ದಿಯಾಗುತ್ತಿದೆ. 2017ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ನಟನೆಯ ಡಿಯರ್ ಜಿಂದಗಿ ಚಿತ್ರದ ಪ್ರಮೋಷನ್ ಗಾಗಿ ಶಾರುಖ್ ಹಾಗೂ ಆಲಿಯಾ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದರು. ಈ ವೇಳೆ ಕರಣ್, ಶಾರುಖ್ ಖಾನ್ ಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಅಂದು ಶಾರುಖ್ ನೀಡಿದ್ದ ಉತ್ತರ ಇಂದು ನಿಜವಾಗಿದೆ. ‘ರಣವೀರ್ ಸಿಂಗ್ ಅರೆಸ್ಟ್ ಆಗುವುದು ಅಥವಾ ಅವರ ವಿರುದ್ಧ ಕೇಸ್ ದಾಖಲಾಗುವುದು ಯಾವ ಕಾರಣಕ್ಕೆ’ ಎಂದು ಕರಣ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಶಾರುಖ್ ಖಾನ್ ರಣವೀರ್ , ‘ಬಟ್ಟೆ ಧರಿಸಿದ್ದಕ್ಕೆ ಅಥವಾ ಬಟ್ಟೆ ಧರಿಸದೆ ಇರುವುದಕ್ಕೆ’ ಎಂದು ಹಾಸ್ಯ ರೀತಿಯಲ್ಲಿ ಉತ್ತರಿಸಿದ್ದು ಇದೀಗ ನಿಜವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now