• December 21, 2025

“ಪಕ್ಷ ಶಿಸ್ತಿನ ಬಗ್ಗೆ ಡಿಕೆ ಶಿವಕುಮಾರ್ ಎಚ್ಚರಿಕೆ: ಅದನ್ನು ಉಲ್ಲಂಘಿಸಿದ ಯಾರಿಗೆ ಬೇಕಾದರೂ ನೋಟಿಸ್ ಅನಿವಾರ್ಯ”

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಿಸ್ತನ್ನು ಎಲ್ಲರೂ ಕಟ್ಟುಕಟ್ಟಾಗಿ ಪಾಲಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, “ಯಾರು ಶಿಸ್ತು ಉಲ್ಲಂಘಿಸಿದರೂ ಅವರಿಗೆ ನೋಟಿಸ್ ನೀಡಲಾಗುವುದು. ಇದರಲ್ಲಿ ಯಾರಿಗೂ ವಿನಾಯಿತಿ ಇಲ್ಲ” ಎಂದು ತಿಳಿಸಿದರು.

ಇತ್ತೀಚೆಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ಮಾತನಾಡಿದ ಡಿಕೆಶಿ, “ಇಕ್ಬಾಲ್ ಹುಸೇನ್‌ಗೂ ನೋಟಿಸ್ ನೀಡಿದ್ದೇವೆ, ಅಗತ್ಯವಿದ್ದರೆ ಇತರರಿಗೂ ನೀಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

“ನಾನು ಯಾರಿಗೂ ಸಿಎಂ ಆಗಬೇಕೆಂದು ನನ್ನ ಹೆಸರು ಹೇಳಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವಾಗ ಯಾರೂ ಬೇರೆಯದೇ ಧ್ವನಿ ಎತ್ತಬಾರದು” ಎಂಬುದಾಗಿ ಹೇಳುವ ಮೂಲಕ ಪಕ್ಷದಲ್ಲಿ ಒಂದೊಂದು ಧ್ವನಿ ಇರಬೇಕೆಂದು ಡಿಕೆಶಿ ಸ್ಪಷ್ಟ ಸಂದೇಶ ನೀಡಿದ್ದಾರೆ.

ಅವರು ಮುಂದುವರಿದು, “ಪಕ್ಷಕ್ಕಾಗಿ ನಾನೊಬ್ಬನೇ ಕಷ್ಟಪಟ್ಟಿಲ್ಲ. ನೂರಾರು ಕಾರ್ಯಕರ್ತರು, ಸಾವಿರಾರು ಜನರೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಮೊದಲು ಅವರ ಬಗ್ಗೆ ಯೋಚಿಸಬೇಕು” ಎಂದು ಶಿಸ್ತು ಉಲ್ಲಂಘನೆ ಮಾಡುವವರಿಗೆ ತೀವ್ರ ಎಚ್ಚರಿಕೆ ನೀಡಿದರು.

ಶಾಸಕರ ಅಸಮಾಧಾನದ ವಿಚಾರಕ್ಕೂ ಪ್ರತಿಕ್ರಿಯಿಸಿದ ಡಿಕೆಶಿ, “ರಾಂದೀಪ್ ಸುರ್ಜೇವಾಲಾ ಅವರು ಮುಂದಿನ ಚುನಾವಣೆಯ ತಯಾರಿ ದೃಷ್ಟಿಯಿಂದ ಶಾಸಕರ ಸಭೆ ನಡೆಸಿದ್ದರು. ಯಾವುದೇ ಅಸಮಾಧಾನ ಇಲ್ಲ. ಎಲ್ಲ ಶಾಸಕರಿಗೂ ಹೊಣೆಗಾರಿಕೆ ನೀಡಿ, ತಯಾರಿ ಕೈಗೆತ್ತಿಕೊಳ್ಳಲಾಗುತ್ತಿದೆ” ಎಂದಿದ್ದಾರೆ

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now