• March 14, 2026

ಕಾಶ್ಮೀರದಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದ ಇಮ್ರಾನ್ ಹಶ್ಮಿ: ಸುಳ್ಳು ಹೇಳುತ್ತಿದ್ದಾರೆ ಎಂದ ನೆಟ್ಟಿಗರು

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ತೆರಳಿದ್ದ ವೇಳೆ ಅವರ ಮೇಲೆ ಕಲ್ಲು ಎಸೆಯಲಾಗಿದೆ ಎಂಬ ಸುದ್ದಿ ಹರಡಿತ್ತು. ಏಕಾ ಏಕಿ ನಡೆದ ದಾಳಿಯಿಂದ ಗಾಬರಿಗೊಂಡ ಇಮ್ರಾನ್ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಇದೆಲ್ಲಾ ಸುಳ್ಳು ಎಂದು ಇಮ್ರಾನ್ ಹಶ್ಮಿ ಹೇಳಿದ್ದಾರೆ. ನನ್ನ ಮೇಲೆ ಕಲ್ಲು ತೂರಾಟವಾಗಲಿ, ದಾಳಿಯಾಗಲಿ ನಡೆದಿಲ್ಲ. ಇದೆಲ್ಲಾ ಗಾಸಿಪ್ ಅಷ್ಟೇ. ನಾನು ಕಾಶ್ಮೀರದಲ್ಲಿ ಸೇಫ್ ಆಗಿದ್ದು, ಚಿತ್ರೀಕರಣದಲ್ಲಿ ಭಾಗಿ ಆಗಿದ್ದೇನೆ ಎಂದು ಹಶ್ಮಿ ಹೇಳಿದ್ದಾರೆ. ಇಮ್ರಾನ್ ಮೇಲೆ ದಾಳಿ ನಡೆದಿದ್ದರು ತಮ್ಮ ರಕ್ಷಣೆಗಾಗಿ ಇಮ್ರಾನ್ ಸುಳ್ಳು ಹೇಳುತ್ತಿದ್ದಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇಮ್ರಾನ್ ಹಶ್ಮಿ ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ತೆರಳಿದ್ದಾರೆ. ಕಳೆದ ಮೂರು ದಿನಗಳಿಂದ ಕಾಶ್ಮೀರದಲ್ಲಿ ಕಾಶ್ಮೀರದಲ್ಲಿ ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಮ್ರಾನ್ ಹಶ್ಮಿ ಮೇಲೆ ಏಕಾ ಏಕಿ ದಾಳಿ ನಡೆದಿದ್ದು ಘಟನೆಯಿಂದ ಇಮ್ರಾನ್ ಅಘಾತಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ಕಾಶ್ಮೀರದ ಪಹಲ್ಗಾಂನಲ್ಲಿ ನಡೆಯುತ್ತಿದೆ. ಎರಡನೇ ದಿನದ ಶೂಟಿಂಗ್ ಮುಗಿಸಿಕೊಂಡ ಇಮ್ರಾನ್ ಕಾಶ್ಮೀರದ ಪಹಲ್ಗಾಂ ಮಾರುಕಟ್ಟೆಗೆ ತೆರಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಇಮ್ರಾನ್ ಮೇಲೇ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಸಡನ್ ಆಗಿ ನಡೆದ ಈ ಬೆಳವಣಿಗೆಯಿಂದ ಇಮ್ರಾನ್ ಹಶ್ಮಿ ಆಘಾತಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಸ್ವತಃ ಇಮ್ರಾನ್ ಹಶ್ಮಿ ಇದೆಲ್ಲವು ಸುಳ್ಳು ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now