ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಗ್ ಬಾಸ್ ಮನೆಯನ್ನು ವೇಶ್ಯಾ ಗೃಹಕ್ಕೆ ಹೋಲಿಸಿದ ಸಿಪಿಐ ಮುಖಂಡ
ಪರಸ್ಪರ ಪರಿಚಯವೇ ಇಲ್ಲದ ಯುವಕ,ಯುವತಿಯರನ್ನು ಒಟ್ಟಿಗೆ ಬದುಕಲು ಬಿಡುವುದು ಬ್ರಾತಲ್ ಹೌಸ್ ಮಾದರಿಯಂತೆ. ವೇಶ್ಯಾಗೃಹಕ್ಕೆ ಹೋಗಿ ಬರುವವರು ಹೆಮ್ಮೆಯಿಂದ ಹೊರಗೆ ಬರಲು ಸಾಧ್ಯವೇ? ಆ ಮನೆಯಲ್ಲಿ ಕಲಿಯಲು ಏನು ಇಲ್ಲ ಎಂದಿದ್ದಾರೆ.
ನಾರಾಯಣ ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ನಟ, ಬಿಗ್ ಬಾಸ್ ನಿರೂಪಕ ನಾಗಾರ್ಜುನ್ ಅವರನ್ನು ಅಣಕಿಸುವಂತೆ ಪ್ರಶ್ನೆ ಮಾಡಿದ್ದಾರೆ. ನಾಗಣ್ಣ ನಾಗಣ್ಣ, ಈ ಬಿಗ್ ಬಾಸ್ ಶೋನಲ್ಲಿ ನೀವು ಮದುವೆ ಆದವರಿಗೆ ಲೈಸೆನ್ಸ್ ಕೊಟ್ಟಿದ್ದೀರಿ, ಶೋಭನ ಕೋಣೆ ಅರೇಂಜ್ ಮಾಡಿದ್ದೀರಿ. ಮದುವೆ ಆಗದವರ ಕತೆ ಏನು? ಆ ನೂರು ದಿನ ಅವರು ಅಲ್ಲಿ ಏನು ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ ವಾರ ಆರಂಭವಾದ ಬಿಗ್ ಬಾಸ್ ತೆಲುಗು 6ನೇ ಸೀಸನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಟಿಆರ್ ಪಿ ರೇಟಿಂಗ್ ನಲ್ಲಿ ಬಿಗ್ ಬಾಸ್ ಮುಂದಿದೆ.
