• June 15, 2026

ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶ ಮತ್ತೆ ಮುಂದೂಡಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಒಂದು ವರ್ಷದ ಸಾಧನಾ ಸಮಾವೇಶ ನಡೆಸಲು ಸರ್ಕಾರ ತೀರ್ಮಾನಿಸಿಕೊಂಡಿತ್ತು. ಆದ್ರೆ ಅದ್ಯಾಕೋ ಸಮಾವೇಶಕ್ಕೆ ಮುಹೂರ್ತ ಕೂಡಿ ಬರುತ್ತಿಲ್ಲ. ಈ ಹಿಂದೆ ಮುಂದೂಡಿಕೆಯಾಗಿದ್ದ ಸಮಾವೇಶ ಇದೀಗ ಮತ್ತೆ ಮುಂದೂಡಲಾಗಿದೆ. ಈ ಮೊದಲು ಜುಲೈ 28ರಂದು ಸಮಾವೇಶ ಮಾಡಲು ದಿನಾಂಕ ನಿಗದಿಯಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಕಾರ್ಯಕರ್ತರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಸಮಾವೇಶ ಮುಂದೂಡಲಾಗಿತ್ತು. ಸದ್ಯ ಪರಿಸ್ಥಿತಿ ಶಾಂತವಾಗಿದ್ದು ಆಗಸ್ಟ್ 28ರಂದು ದೊಡ್ಡಬಳ್ಳಾಪುರದಲ್ಲೇ ಸಮಾವೇಶ ಆಯೋಜನೆಗೆ ನಿರ್ಧರಿಸಿ, ಕಳೆದ ರಾತ್ರಿಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಸಮಾವೇಶದ ರೂಪುರೇಷೆ, ಸಿದ್ದತೆ ಕುರಿತು ಚರ್ಚಿಸಿ ಎಲ್ಲ ತಯಾರಿ ಮಾಡಿಕೊಳ್ಳಲು ಸಚಿವರು ಮತ್ತು ಶಾಸಕರ ತಂಡಕ್ಕೆ ಸಿಎಂ ನಿರ್ದೇಶನ ನೀಡಿದರು. ಆದರೆ ಇದೀಗ ಆರ್ ಎಸ್ ಎಸ್ ಕಚೇರಿಯಿಂದ ಮತ್ತೆ ಸಿಎಂಗೆ ಬುಲಾವ್ ಬಂದಿದ್ದು ಮತ್ತೊಮ್ಮೆ ಸಾಧನಾ ಸಮಾವೇಷ ಮುಂದೂಡಲಾಗಿದೆ. ಆಗಸ್ಟ್ 28 ರಂದು ಪುತ್ತೂರಿನಲ್ಲಿ ಸಂಘದ ಪ್ರಾಂತ ಬೈಠಕ್ ನಡೆಯಲಿದೆ. ಈ ಬೈಠಕ್ಗೆ ಈಗಾಗಲೇ ಸಿದ್ದತೆ ಪೂರ್ಣಗೊಂಡಿದೆ. ಆ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಬ್ಬರೂ ಭಾಗಿ ಆಗಬೇಕಿದೆ. ಹೀಗಾಗಿ ಸರ್ಕಾರದ ಸಾಧನಾ ಸಮಾವೇಶದ ದಿನಾಂಕ ಬದಲಿಸುವಂತೆ ತಿಳಿಸಿದ್ದಾರೆ. ಹೀಗಾಗಿ ಸರ್ಕಾರದ ಸಮಾವೇಶ ಮತ್ತೆ ಮುಂದುಡೂವ ಬಗ್ಗೆ ಚರ್ಚೆ ಆಗಿದೆ. ಬಹುತೇಕ ಸಮಾವೇಶ ಮತ್ತೆ ಮುಂದೂಡಿಕೆ ಆಗಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now