• January 1, 2026

ರಾಕೇಶ್ ಗಾಗಿ ಮನೆಯವರ ಕೆಂಗಣ್ಣೀಗೆ ಗುರಿಯಾದ ಸೋನು ಗೌಡ

ಕನ್ನಡದ ಬಿಗ್ ಬಾಸ್ ಓಟಿಟಿ ಶೋ ನಾಲ್ಕನೇ ವಾರ ಪೂರೈಸಿ ಐದನ್ನೆ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ದೊಡ್ಮನೆ ಒಳಗೆ ಪ್ರೀತಿ, ಪ್ರೇಮ, ಜಗಳ, ಕದನಗಳು ಹೆಚ್ಚುತ್ತಲೆ ಇದೆ. ನಿನ್ನೆ ತಾನೇ ಸೋನು ಗೌಡ ಮೇಲೆ ಆರ್ಯವರ್ಧನ್ ಗುರೂಜಿ ಗರಂ ಆಗಿದ್ದರು. ಇದೀಗ ರಾಕೇಶ್ ವಿಷಯದಿಂದ ಸೋನು ಮೇಲೆ ಮತ್ತೆ ಆರ್ಯವರ್ಧನ್ ಕೋಪ ಮಾಡಿಕೊಂಡಿದ್ದಾರೆ. ದೊಡ್ಮನೆಗೆ ಬಂದ ದಿನದಿಂದಲೂ ಸೋನು ಗೌಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ತಮ್ಮ ಬಾಯಿಯಿಂದಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಸೋನು ಗೌಡಗೆ ಸ್ವತಃ ನಟ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟಾದರೂ ಸೋನು ಮಾತ್ರ ತನ್ನ ವರಸೆ ಬದಲಿಸಿಕೊಂಡಿಲ್ಲ. ಬಿಗ್ ಬಾಸ್ ಮನೆಯೊಳಗೆ ಒಬ್ಬರ ಪರವಾಗಿ ಮತ್ತೊಬ್ಬರು ಧ್ವನಿ ಎತ್ತುವುದು ಕಾಮನ್. ಸದ್ಯ ರಾಕೇಶ್ ಗಾಗಿ ಸೋನು ಧ್ವನಿಯೆತ್ತಿದ್ದು ಇದರಿಂದ ಮನೆಯವರ ಕೆಂಗಣ್ಣೀಗೆ ಸೋನು ಗುರಿಯಾಗಿದ್ದಾರೆ. ಆರ್ಯವರ್ಧನ್ ಗುರೂಜಿ ಮನೆಯವರಿಗಾಗಿ ಪಪಾಯ ಹಣ್ಣು ಕಟ್ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಸೋನು, ರಾಕಿಗೆ ಮೂರು ಪೀಸ್ ಪಪಾಯ ಎಂದಿದ್ದಾರೆ. ಆಗ ಸೋಮಣ್ಣ ಮಾಚಿಮಾಡ, ಅವರು ನಿನಗೆ ಮಾತ್ರ ಕಾಣುತ್ತಾರಾ ಎಂದಿದ್ದಾರೆ. ಬಳಿಕ ರಾಕೇಶ್‌ಗಾಗಿ ಬಿಗ್ ಬಾಸ್ ಮನೆಯಲ್ಲಿ ಎರಡು ಮನೆ ಮಾಡಬೇಕಾ ಎಂದು ಗುರೂಜಿ ಕೂಡ ಸೋನು ವಿರುದ್ಧ ಗರಂ ಆಗಿದ್ದಾರೆ.   ಇದಕ್ಕೆ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದು, ಮಾತನಾಡಬೇಕಾದ್ರೆ ಸರಿಯಾಗಿ ಮಾತನಾಡು ಅಂತಾ ನನಗೆ ಹೇಳುತ್ತೀರಾ. ನೀವು ಕೂಡ ಮಾತನಾಡಬೇಕಾದ್ರೆ ನಿಗಾ ಇಟ್ಕೋಂಡು ಮಾತನಾಡಿ ಎಂದು ಸೋನು ಗುರೂಜಿ ವಿರುದ್ಧ ಗರಂ ಆಗಿದ್ದಾರೆ. ಅದಕ್ಕೆ ಸುಮ್ಮನೆ ಕೂತ್ಕೋ ನೀನು, ಗಂಟಲು ಹರ್ಕೋ ಬೇಡ ಎಂದು ಗುರೂಜಿ ಸೋನುಗೆ ವಾರ್ನ್ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now