ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಜೊತೆ ಜೊತೆಯಲಿ’ ಧಾರವಾಹಿ ಗಲಾಟೆ ಬಳಿಕ ಬಿಗ್ ಬಾಸ್ ಮನೆಗೆ ನಟ ಅನಿರುದ್ಧ್ ಎಂಟ್ರಿ?
ಮೂಲಗಳ ಪ್ರಕಾರ ಸಾಕಷ್ಟು ಹಿಂದೆಯೇ ಬಿಗ್ ಬಾಸ್ ಮನೆಗೆ ಅನಿರುದ್ಧ್ ಹೋಗ್ತಾರೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅನಿರುದ್ಧ್ ಧಾರವಾಹಿಯನ್ನು ಬಿಡಲಿದ್ದಾರೆ ಅಥವಾ ಧಾರವಾಹಿಯನ್ನು ಬೇಗ ಮುಗಿಸಲು ಹೇಳಿದ್ದಾರೆ ಎಂದು ಸುದ್ದಿ ಸೆಟ್ ನಲ್ಲಿ ಹರಿದಾಡಿತ್ತು. ಜೊತೆಗೆ ವಾಹಿನಿ ಕೂಡ ಅನಿರುದ್ಧ್ ಅವರನ್ನು ದೊಡ್ಮನೆಗೆ ಎಂಟ್ರಿಕೊಡುವಂತೆ ಕೇಳಿಕೊಂಡಿತ್ತು. ಹೀಗಾಗಿ ಈ ಭಾರಿ ಬಿಗ್ ಬಾಸ್ ಮನೆಗೆ ಅನಿರುದ್ಧ್ ಎಂಟ್ರಿಕೊಡೋದು ಅನ್ಪಾರ್ಮ್ ಆಗಿದೆ.
ಮತ್ತೊಂದು ಕಡೆ ಜೊತೆ ಜೊತೆಯಲಿ ಸೀರಿಯಲ್ ಸೆಟ್ ನಲ್ಲಿ ನಡೆದ ಮಾತಿನ ಚಕಮಕಿಯಿಂದ ಅನಿರುದ್ಧ್ ಅವರನ್ನು ರಿಯಾಲಿಟಿ ಶೋ ಹಾಗೂ ಸೀರಿಯಲ್ ನಿಂದ ಬ್ಯಾನ್ ಮಾಡಲಾಗಿದೆ. ಅಲ್ಲದೆ ಈ ಬಗ್ಗೆ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಮನವಿ ಮಾಡಿವೆ. ಆದರೆ ಇದನ್ನು ವಾಹಿನಿ ಎಷ್ಟರ ಮಟ್ಟಿಗೆ ಪಾಲಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
