ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಗತ್ಯ ಬಿದ್ದರೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತೇನೆ: ಅಲ್ಲು ಅರ್ಜುನ್
ಸದ್ಯಕ್ಕಂತೂ ಹಿಂದಿಯಲ್ಲಿ ನಟಿಸೋದು ನನ್ನ ಕಂಫರ್ಟಬಲ್ ಜೋನ್ ನ ಹೊರಗಿರುವ ವಿಚಾರ. ಆದರೆ ಅಗತ್ಯ ಬಿದ್ದರೆ ಅಲ್ಲಿ ಹೋಗಿ ನಟಿಸುತ್ತೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಈ ಮೂಲಕ ಸದ್ಯಕ್ಕೆ ಹಿಂದಿ ಸಿನಿಮಾ ರಂಗಕ್ಕೆ ಹೋಗೋದಿಲ್ಲ ಎಂಬುದನ್ನು ಅಲ್ಲು ಅರ್ಜುನ್ ಕನ್ಪಾರ್ಮ್ ಮಾಡಿದ್ದಾರೆ.
ಇತ್ತೀಚೆಗೆ ನಟ ಮಹೇಶ್ ಬಾಬು ಬಿಟೌನ್ ಎಂಟ್ರಿ ಬಗ್ಗೆ ಮಾತನಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಬಾಲಿವುಡ್ ಗೆ ನನ್ನ ಭರಿಸುವ ಶಕ್ತ ಇಲ್ಲ. ಹೀಗಾಗಿ ನಾನು ಅಲ್ಲಿಗೆ ಹೋಗುವುದಿಲ್ಲ ಎಂದಿದ್ದರು. ಮಹೇಶ್ ಬಾಬು ಹೇಳಿಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ, ಚರ್ಚೆಗೂ ಗ್ರಾಸವಾಗಿತ್ತು. ಬಳಿಕ ಮಹೇಶ್ ಬಾಬು ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.
