• January 2, 2026

ಗೌರವ ಡಾಕ್ಟರೇಟ್ ಸ್ವೀಕರಿಸಿದ ಭಾವುಕರಾದ ನಟ ರಮೇಶ್ ಅರವಿಂದ್

ಬೆಳಗಾವಿಯ ರಾಣಿ ಚೆನ್ನಮ್ಮ ‌ವಿವಿಯ 10ನೇ ಘಟಿಕೋತ್ಸವ ಕಾರ್ಯಕ್ರಮ ನಿನ್ನೆ (ಸೆ.14) ರಂದು ನಡೆದಿದ್ದು ಈ ವೇಳೆ ಖ್ಯಾತ ನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಸಮಾಜ ಸೇವಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ನಗರಾಭಿವೃದ್ಧಿ ತಜ್ಞ ಹಾಗೂ ಸಮಾಜ ಸೇವಕರಾದ ವ್ಹಿ. ರವಿಚಂದರ್ ವೆಂಕಟರಾಮನ್ ಅವರಿಗೆ ‘ಡಾಕ್ಟರ್‌ ಆಫ್ ಸೈನ್ಸ್’, ಸಿನಿಮಾ ರಂಗದ ಸೇವೆ ಪರಿಗಣಿಸಿ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ ಗೆ ‘ಡಾಕ್ಟರ್‌ ಆಫ್ ಲೆಟರ್ಸ್’ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ವಲಯದಲ್ಲಿಯ ಸೇವೆ ಪರಿಗಣಿಸಿ ಬೀದರನ ಬಸವತತ್ವ ಪ್ರಚಾರಕಿ, ಕಾಯಕ ದಾಸೋಹ ಪ್ರಚಾರಕಿ ಮಾತಾ ಅಕ್ಕ ಅನ್ನಪೂರ್ಣಾ ತಾಯಿ ಅವರಿಗೆ ‘ಡಾಕ್ಟರ್‌ ಆಫ್ ಲೆಟರ್ಸ್’ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ರಮೇಶ್ ಅರವಿಂದ್ ತಂದೆಯನ್ನು ನೆನೆದು ಭಾವುಕರಾದರು. ಗೌರವ ಡಾಕ್ಟರೇಟ್ ಸಿಕ್ಕಿದೆ ಎಂದು ಗೊತ್ತಾದ ತಕ್ಷಣ ಫ್ಯಾಮಿಲಿ ಗ್ರೂಪ್‌ಗೆ ಮೆಸೇಜ್ ಹಾಕಿದೆ‌. ನನ್ನ ಅಣ್ಣ, ಅಕ್ಕ, ತಮ್ಮ ಮೂರು ಜನ ಒಂದೇ ರಿಪ್ಲೈ ಕೊಟ್ರು. ಅಭಿನಂದನೆಗಳು. ಅಪ್ಪ ಇದ್ದಿದ್ರೆ ತುಂಬಾನೇ ಖುಷಿ ಪಡ್ತಿದ್ರು ಎಂದು ನನ್ನ ಮೆಸೇಜ್ ಗೆ ರಿಪ್ಲೈ ಮಾಡಿದ್ರು. ಹೆತ್ತವರು ನಮ್ಮನ್ನು ನೋಡಿ ಖುಷಿಯಾಗುವಂತಹ ವಿಷಯಗಳು, ನಮ್ಮ ಆಪ್ತರು, ಕುಟುಂಬ ನಮ್ಮನ್ನ ನೋಡಿ ಖುಷಿಪಡುವ ವಿಷಯಗಳು ಸಿಕ್ಕಾಗ ನಮಗೂ ಖುಷಿ ಆಗಿಯೇ ಆಗುತ್ತೆ ಎಂದರು. ನನಗೆ ಈ ಪ್ರಶಸ್ತಿ ಬರಲು ಕಾರಣ ಸಿನಿಮಾ. ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿದೆ. ಅದ್ಭುತ ಸಿನಿಮಾ, ಅದ್ಭುತ ಪಾತ್ರಗಳನ್ನು ಕೊಟ್ಟಿದೆ. ಅದ್ಭುತವಾದ ನಟ, ನಟಿಯರ ಜೊತೆ ಅಭಿನಯಿಸುವ ಅವಕಾಶ ಕೊಟ್ಟಿದೆ‌. ನನಗೆ ಅನುಕೂಲವಾದ ಜೀವನವನ್ನು ಸಿನಿಮಾ ಮಾಡಿ ಕೊಟ್ಟಿದೆ‌. ಶ್ರೇಷ್ಠವಾದ ಡೈರೆಕ್ಟರ್‌ಗಳು, ಸಿನಿಮಾಟೋಗ್ರಾಫರ್, ಮ್ಯೂಸಿಕ್ ಡೈರೆಕ್ಟರ್, ಗ್ರೇಟ್ ಟೆಕ್ನಿಷಿಯನ್ ಜೊತೆ ಸೇರಿ ದೃಶ್ಯ ಕಾವ್ಯ ಮಾಡುವ ಅವಕಾಶ ಸಿನಿಮಾ ನನಗೆ ಕೊಟ್ಟಿದೆ. ಮೂರು ದಶಕಗಳ ಕಾಲ ನೀವು ನನ್ನ ಸ್ನೇಹಿತರಾಗಿದ್ದೀರಿ.‌ ಸಿನಿಮಾ ರಂಗದಲ್ಲಿ ನನಗೆ ಅವಕಾಶ ಕೊಟ್ಟ ಎಲ್ಲ ಮಹನೀಯರಿಗೆ ಧನ್ಯವಾದ. ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು. ಸಿನಿಮಾ ಅನ್ನೋದು ಬಿಟ್ರೆ ನನ್ನ ಪುಟ್ಟ ಜಗತ್ತು ನನ್ನ ಫ್ಯಾಮಿಲಿ.‌ನನ್ನ ಅಮ್ಮ, ಹೆಂಡತಿ, ಮಗ, ಮಗಳು, ಅಳಿಯ ಸೇರಿ ಈ ಫ್ಯಾಮಿಲಿ ದೊಡ್ಡ ಸಪೋರ್ಟ್ ನನಗೆ. ಇಲ್ಲಿ ನೆಮ್ಮದಿ ಇಲ್ಲ ಅಂದ್ರೆ ಸಿನಿಮಾ ಜಾಗದಲ್ಲಿ ನಾನು ಏನು ಮಾಡಲಾಗುತ್ತಿರಲಿಲ್ಲ. ನನ್ನ ಕುಟುಂಬದವರಿಗೆ ಧನ್ಯವಾದಗಳು‌. ಮೂರನೇಯದ್ದು ನೀವು, ನಾನು ಮೊದಲ ಮಾಡಿದ ಸುಂದರ ಸ್ವಪ್ನ ಚಿತ್ರ, ಮೌನಗೀತೆಯಿಂದ  ಮಧುಮಾಸವರೆಗೂ ನೀವು ನನಗೆ ಸೈ ಎಂದಿದ್ದೀರಿ‌‌. ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ, ಅಮೆರಿಕ ಅಮೆರಿಕ, ಉಲ್ಟಾಪಲ್ಟಾ ಚಿತ್ರ ಬಂದಾಗ ನನ್ನ ಬೆನ್ನು ತಟ್ಟಿದೀರಿ.ಆಪ್ತಮಿತ್ರ,ರಾಮ ಶ್ಯಾಮ ಭಾಮ, ವೀಕೆಂಡ್ ವಿಥ್ ರಮೇಶ್ ಶೋ ಮಾಡಿದೆ ಆಗಲೂ ನೀವು ನನ್ನ ಜೊತೆಗಿದ್ರಿ‌. ನೀವು ನನ್ನ ಕೈ ಬಿಡಲಿಲ್ಲ, ಹಾಗಾಗಿ 30 ವರ್ಷ ನಾನಿಲ್ಲಿದೀನಿ ಇದಕ್ಕೆಲ್ಲ ಕಾರಣ ನೀವು. ಟಿಕೆಟ್ ತೆಗೆದುಕೊಂಡು ಚಿತ್ರ ನೋಡಿದ ಪ್ರತಿ ಪ್ರೇಕ್ಷಕನಿಗೂ ನನ್ನ ಧನ್ಯವಾದಗಳು’ ಎಂದು ನಟ ರಮೇಶ್ ಅರವಿಂದ್ ತಮ್ಮ ಸಕ್ಸಸ್ ಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now