ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆದ ಧೃವ ಸರ್ಜಾ ಪತ್ನಿ ಪ್ರೇರಣ ಸೀಮಂತ
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿ ಸೀಮಂತ ಶಾಸ್ತ್ರ ಮಾಡಲಾಗಿದ್ದು ಈ ವೇಳೆ ಧೃವ ಸರ್ಜಾ ಅಣ್ಣನನ್ನು ನೆನಪು ಮಾಡಿಕೊಂಡು ಬೇಸರಗೊಂಡಿದ್ದಾರೆ. ಯಾವುದೇ ಸಮಾರಂಭದಲ್ಲೂ ಖುಷಿ ಖುಷಿಯಾಗಿ ಭಾಗಿಯಾಗುತ್ತಿದ್ದಅಣ್ಣ ತಮ್ಮಂದಿರು ಭಾಗಿಯಾಗುತ್ತಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಇಲ್ಲದೆ ಇರುವುದು ಧೃವ ಸರ್ಜಾಗೆ ನೋವು ತರಿಸಿದೆ.
ಈಗಾಗಲೇ ಸರ್ಜಾ ಕುಟುಂಬಕ್ಕೆ ರಾಯನ್ ರಾಜ್ ಸರ್ಜಾ ಆಗಮನದಿಂದ ಖುಷಿಯಾಗಿದೆ. ಇದೀಗ ಮತ್ತೊಂದು ಮುದ್ದು ಮಗು ಆಗಮನಕ್ಕೆ ಇಡೀ ಕುಟುಂಬವೇ ಎದುರು ನೋಡುತ್ತಿದೆ. ಪ್ರೇರಣ ಸೀಮಂತ ಕಾರ್ಯದಲ್ಲಿ ಸಿನಿಮಾ ರಂಗದ ಆಪ್ತರು, ಸರ್ಜಾ ಕುಟುಂಬಸ್ಥರು, ಪ್ರೇರಣಾ ಕುಟುಂಬಸ್ಥರು, ಮೇಘನಾ ರಾಜ್ ಸೇರಿದಂತೆ ಸಾಕಷ್ಟು ಮಂದಿ ಹಾಜರಿದ್ದರು.
