• March 16, 2026

‘ಜೊತೆ ಜೊತೆಯಲಿ’ ಆರ್ಯವರ್ಧನ್ ಜಾಗಕ್ಕೆ ಬಂದ ಸ್ಯಾಂಡಲ್ ವುಡ್ ನಟ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ತಂಡದಿಂದ ಇದೀಗ ಆರ್ಯವರ್ಧನ್ ಪಾತ್ರಧಾರಿ ನಟ ಅನಿರುದ್ಧ್ ಹೊರ ಹೋಗಿದ್ದಾರೆ. ಹೀಗಾಗಿ ಆರ್ಯವರ್ಧನ್ ಪಾತ್ರಕ್ಕೆ ಧಾರಾವಾಹಿ ತಂಡ ಉತ್ತಮ ನಟನನ್ನೇ ಹುಟುಕಾಟ ಮಾಡುತ್ತಿದೆ. ಸದ್ಯ ಅನಿರುದ್ಧ್ ರಿಂದ ತೆರವಾಗಿರುವ ಆರ್ಯವರ್ಧನ್ ಜಾಗಕ್ಕೆ ನಟ ಹರೀಶ್ ರಾಜ್ ಬರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಮೊದಲು ಆರ್ಯವರ್ಧನ್ ಪಾತ್ರಕ್ಕೆ ನಿರ್ದೇಶಕ ಅನೂಪ್ ಭಂಡಾರಿಯನ್ನು ಧಾರಾವಾಹಿ ತಂಡ ಅಪ್ರೋಚ್ ಮಾಡಿತ್ತು. ಆದರೆ ಅನೂಪ್ ಸಿನಿಮಾದ ಕೆಲಸದ ಕೆಲಸದಲ್ಲಿ ತೊಡಗಿಕೊಂಡ ಕಾರಣದಿಂದ ಆರ್ಯವರ್ಧನ್ ಪಾತ್ರವನ್ನು ನಿರಾಕರಿಸಿದ್ದರು. ಆ ಬಳಿಕ ಆರ್ಯವರ್ಧನ್ ಪಾತ್ರವನ್ನು ಸುನೀಲ್ ಪುರಾಣಿಕ್ ಮಾಡುತ್ತಾರೆ ಎನ್ನಲಾಗಿತ್ತು.ಇದರ ಜೊತೆಗೆ ಹಲವು ನಟರನ್ನು ಧಾರಾವಾಹಿ ತಂಡ ಅಪ್ರೋಚ್ ಮಾಡಿದೆ. ಅವರುಗಳಲ್ಲಿ ಸುನೀಲ್ ಪುರಾಣಿಕ್ ಹಾಗೂ ಹರೀಶ್ ರಾಜ್ ಹೆಸರು ಕೇಳಿ ಬರ್ತಿದೆ. ಬಹುತೇಕ ಸುನೀಲ್ ಪುರಾಣಿಕ್ ಹೆಸರು ಫೈನಲ್ ಆಗಿದೆ. ಜೊತೆಗೆ ಹರೀಶ್ ರಾಜ್ ಹೆಸರು ಜೋರಾಗಿಯೇ ಕೇಳಿ ಬರ್ತಿದೆ. ನಿನ್ನೆಗೆ ಅನಿರುದ್ಧ್ ಪಾತ್ರ ಮುಕ್ತಾಯವಾಗಿದೆ. ಹೀಗಾಗಿ ಜೊತೆ ಜೊತೆಯಲಿ ತಂಡಕ್ಕೆ ಸದ್ಯದಲ್ಲೇ ಹೊಸ ನಾಯಕನನ್ನು ಕರೆದುಕೊಂಡು ಬರಬೇಕಿದೆ. ಒಟ್ನಲ್ಲಿ ಎಲ್ಲಾ ಬೆಳವಣಿಗೆಗಳನ್ನು ನೋಡ್ತಿರೋ ಪ್ರೇಕ್ಷಕರು ಆರ್ಯವರ್ಧನ್ ಪಾತ್ರಧಾರಿ ಯಾರಾಗ್ತಾರೆ ಎಂಬ ಕ್ಯೂರಿಯಾಸಿಟಿಯಲ್ಲಿದ್ದಾರೆ. ಜೊತೆಗೆ ಹೊಸ ನಟನನ್ನು ಸ್ವೀಕರಸ್ಥಾನ ಅನ್ನೋದನ್ನು ಕಾದು ನೋಡಬೇಕಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now