ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅನಂತ್ ನಾಗ್ ರ ಒಂದೇ ಒಂದು ಮಾತಿಗೆ ಗಾಳಿಪಟ2ಗೆ ಬಂಡವಾಳ ಹೂಡಿದ ನಿರ್ಮಾಪಕ ರಮೇಶ್ ರೆಡ್ಡಿ
ಗಾರೆ ಕೆಲಸದಿಂದ ಮೇಸ್ತ್ರಿ ಆಗಿ, ಬಳಿಕ ಗುತ್ತಿಗೆದಾರನಾಗಿ ಇದೀಗ ಸಿನಿಮಾ ನಿರ್ಮಾಣಕ್ಕೆ ಎಂಟ್ರಿಕೊಟ್ಟಿದ್ದಾರೆ. ಅಂದ ಹಾಗೆ ಮೊದಲು ರಮೇಶ್ ರೆಡ್ಡಿ ಗಾಳಿಪಟ 2 ಸಿನಿಮಾದ ಕಥೆಯನ್ನೇ ಕೇಳಿರಲಿಲ್ಲವಂತೆ. ಅನಂತ್ ನಾಗ್ ಹೇಳಿದ ಒಂದೇ ಒಂದು ಮಾತಿನಿಂದ ಸಿನಿಮಾಗೆ ಬಂಡವಾಳ ಹೂಡೋಕೆ ಸೈ ಎಂದಿದ್ದಾರೆ.
ಸಿನಿಮಾಗೆ ಪ್ರೇಕ್ಷಕರು ನೀಡಿದ ರೆಸ್ಪಾನ್ಸ್ ನೋಡಿ ಸಖತ್ ಖುಷಿಯಾಗಿದೆ. ಟಿವಿ ಹಾಗೂ ಪತ್ರಿಕಾ ಮಾಧ್ಯಮದವರು ನೀಡಿದ ಬೆಂಬಲದಿಂದಲೇ ನಾನು ಇಂದು ಪಾಸ್ ಆಗಿದ್ದೇನೆ. ನಾನು ಈಗಾಗ್ಲೆ ಗಾಳಿಪಟ 2 ಸಿನಿಮಾದಲ್ಲಿ ಪಾಸ್ ಆಗಿದ್ದೇನೆ ಎಂದು ಗಾಳಿಪಟ 2 ಸಿನಿಮಾದ ಸಕ್ಸಸ್ ಗೆ ಕಾರಣರಾದ ಪ್ರತಿಯೊಬ್ಬರಿಗೂ ಥ್ಯಾಕ್ಸ್ ಹೇಳಿದ್ದಾರೆ.
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅವರಿಗೆ ವೇದಿಕೆ ಮೇಲೆ ಧನ್ಯವಾದ ತಿಳಿಸಿದರು. ಈಗಾಗ್ಲೆ ನಾನು ಪಾಸ್ ಆಗಿದ್ದು ಮುಂದಿನ ಪ್ರೆಸ್ ಮೀಟ್ ನಲ್ಲಿ ಸಿನಿಮಾದ ಕಲೆಕ್ಷನ್ ಕುರಿತಾಗಿ ಹೇಳೋದಾಗಿ ನಿರ್ಮಾಪಕ ರಮೇಶ್ ರೆಡ್ಡಿ ಹೇಳಿದ್ದಾರೆ.
