ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸುದೀಪ್ ಧ್ವನಿ ಕೇಳಿದರೆ ಭಯವಾಗುತ್ತದೆ: ನಾಗಾರ್ಜುನ್
” ಸುದೀಪ್ ಕನ್ನಡ ಹುಡುಗ ಅಲ್ಲ. ನಮ್ಮ ತೆಲುಗು ಹುಡುಗ. ಅವರು ಹೈದರಾಬಾದ್ನವರು. ಅವರು ಇಲ್ಲೇ ಇರುತ್ತಾರೆ. ಸುದೀಪ್ ತುಂಬಾ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದಲ್ಲ. ಈಗಾಗಲೇ ಎಲ್ಲಾ ಭಾಷೆಯಲ್ಲೂ ಸುದೀಪ್ ಸಿನಿಮಾ ಟ್ರೈ ಮಾಡಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ನಟಿಸಿದ್ದೀರಿ ಎಂದು ಗೊತ್ತಿದೆ. ಮಲಯಾಳಂ ಕೂಡ ಮಾಡುತ್ತಿದ್ದೀರ ಎಂದು ನಾನು ಕೇಳಿಪಟ್ಟಿದ್ದೇನೆ. ಈಗಾಗಲೇ ಸುದೀಪ್ ಭಾರತದಾದ್ಯಂತ ಎಲ್ಲರಿಗೂ ಗೊತ್ತಿದೆ. ಈಗ ವಿಕ್ರಾಂತ್ ರೋಣ ಮೂಲಕ ಮತ್ತೆ ಒಂದೇ ಸಿನಿಮಾ ಮೂಲಕ ಎಲ್ಲಾರಿಗೂ ಪರಿಚಿತರಾಗಲಿದ್ದಾರೆ.” ಎಂದು ಕಿಚ್ಚನಿಗೆ ಶುಭ ಹಾರೈಸಿದ್ದಾರೆ.
ಈಗಾಗ್ಲೆ ಟ್ರೈಲರ್ ನೋಡಿ ಸಾಕಷ್ಟು ಇಷ್ಟ ಪಟ್ಟಿದ್ದೇನೆ. 3ಡಿಯಲ್ಲಿ ಸಿನಿಮಾ ನೋಡಿ ಸಾಕಷ್ಟು ದಿನಗಳಾಗಿದೆ. ಇದೀಗ ವಿಕ್ರಾಂತ್ ರೋಣ ಸಿನಿಮಾವನ್ನು 3ಡಿಯಲ್ಲಿ ನೋಡುತ್ತೇನೆ ಎಂದರು. ತೆಲುಗು ಜನ ತುಂಬಾ ಒಳ್ಳೆಯವರು, ಬೇರೆ ಪ್ರೇಕ್ಷಕರ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮವರಿಗೆ ಸಿನಿಮಾ ಇಷ್ಟ ಆಯ್ತು ಅಂದರೆ ಅದನ್ನು ಮುಗಿಲೆತ್ತರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಈ ಉದಾರ ಭಾವವನ್ನು ನೀವು ಶೀಘ್ರದಲ್ಲೇ ನೋಡುತ್ತೀರಾ ಎಂದರು.
