ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಗಂಗಾರತಿ’ಯಲ್ಲಿ ಪಾಲ್ಗೊಂಡ ‘ಬನಾರಸ್’ ಜೋಡಿ ಝೈದ್, ಸೋನಾಲ್
ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾ ಆರಂಭವಾಗುರುವುದೇ ಗಂಗಾ ನದಿ ತಟದಲ್ಲಿ. ಸದ್ಯ ಚಿತ್ರತಂಡ ಇದೀಗ ಅದೇ ಗಂಗಾ ನದಿ ತಟದಲ್ಲಿ ಕಾಣಿಸಿಕೊಂಡಿದೆ. ಝೈದ್ ಖಾನ್ ಹಾಗೂ ಸೋನಾಲ್ ವಾರಾಣಾಸಿಗೆ ಭೇಟಿ ನೀಡಿದ್ದು ಇದೇ ವೇಳೆ ಗಂಗಾರತಿಯಲ್ಲಿ ಭಾಗಿಯಾಗಿದ್ದಾರೆ.
ವಾರಾಣಾಸಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್ನಲ್ಲಿ ಝೈದ್ ಖಾನ್ ಹಾಗೂ ಸೋನಾಲ್ ಭಾಗಿಯಾಗಿದ್ದರು. ಈ ವೇಳೆ ಬನಾರಸ್ ಜೋಡಿಯನ್ನು ಬಾಲಿವುಡ್ ಹಿರಿಯ ನಟ ಸಂಜಯ್ ಮಿಶ್ರಾ ಸನ್ಮಾನ ಮಾಡಿದರು, ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಗಂಗಾರತಿಯಲ್ಲಿ ಪಾಲ್ಗೊಂಡು ಗಂಗಾ ಮಾತೆರೆ ಆಶೀರ್ವಾದ ಪಡೆದರು.
ಬಹುನಿರೀಕ್ಷಿತ ಬನಾರಸ್ ಸಿನಿಮಾ ಇದೇ ನವೆಂಬರ್ 4ರಂದು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಝೈದ್ ಹಾಗೂ ಸೋನಾಲ್ ವಿವಿಧ ದೇವಸ್ಥಾನಗಳಿಗೆ ತೆರೆಳಿ ದೇವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.
