• March 15, 2026

ರಾಜು ಶ್ರೀವಾಸ್ತವ ನಿಧನದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಕಾಮಿಡಿಯನ್ ರೋಹನ್ ಜೋಶಿ

ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಹಲವು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಿವುಡ್ ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾತ್ಸವ್ ಬುಧವಾರ ನಿಧನರಾಗಿದ್ದಾರೆ. ರಾಜು ಶ್ರೀವಾತ್ಸವ್ ನಿಧನಕ್ಕೆ ಚಿತ್ರರಂಗ, ರಾಜಕೀಯ ಗಣ್ಯರು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದದಾರೆ. ಆದರೆ ಮತ್ತೋರ್ವ ಕಾಮಿಡಿಯನ್ ರೋಹನ್ ಜೋಶಿ ಮಾತ್ರ ರಾಜು ಶ್ರೀವಾಸ್ತವ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಸ್ಟ್ಯಾಂಡಪ್​ ಕಾಮಿಡಿ ಲೋಕದಲ್ಲಿ ರಾಜು ಶ್ರೀವಾಸ್ತವ ಸಾಕಷ್ಟು ಖ್ಯಾತಿ ಘಳಿಸಿದ್ದರು. ಅವರ ಸಡನ್ ನಿಧನದಿಂದ ಅಭಿಮಾನಿಗಳು ದುಃಖಿತರಾಗಿದ್ದಾರೆ. ಆದರೆ ರೋಹನ್ ಜೋರಿ ಮಾತ್ರ ‘ಹೊಸ ಅಲೆಯ ಸ್ಟ್ಯಾಂಡಪ್​ ಕಾಮಿಡಿ ಬಗ್ಗೆ ಅವರಿಗೆ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಅವಹೇಳನ ಮಾಡುತ್ತಿದ್ದರು. ಅವರು ಕೆಲವು ಒಳ್ಳೆಯ ಜೋಕ್​ಗಳನ್ನು ಹೇಳಿರಬಹುದು. ಆದರೆ ಹಾಸ್ಯದ ಸ್ಪಿರಿಟ್​ ಏನೆಂಬುದು ಅವರಿಗೆ ಅರ್ಥ ಆಗಲಿಲ್ಲ. ಅವರು ತೊಲಗಲಿ’ ಎಂದಿದ್ದಾರೆ. ಸಾವಿನ ಸಂದರ್ಭದಲ್ಲಿ ರೋಹನ್ ಜೋಶಿ ಹೀಗೆ ಹೇಳಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಜೋಶಿ ತಮ್ಮ ಸ್ಟೇಟ್ ಮೆಂಟ್ ಡಿಲೀಟ್ ಮಾಡಿದ್ದಾರೆ. ಒಂದು ನಿಮಿಷದ ಕೋಪದ ನಂತರ ಇದು ನನ್ನ ವೈಯಕ್ತಿಕ ಭಾವನೆಯ ದಿನ ಅಲ್ಲ ಎಂಬುದನ್ನು ತಿಳಿದುಕೊಂಡು ಕಮೆಂಟ್ ಡಿಲಿಟ್​ ಮಾಡಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ’ ಎಂದು ರೋಹನ್​ ಜೋಶಿ ಸ್ಪಷ್ಟನೆ ನೀಡಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದ ರಾಜು ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 41 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ರಾಜು ಅವರು ಏಕಾಏಕಿ ಜ್ವರ ಕಾಣಿಸಿಕೊಂಡು ಬುಧವಾರ ನಿಧನರಾದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now